ವಿಜಯಪುರ: ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ವಿಜಯಪುರದ ಇಂಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿ, ನಂಬರ್ ಪಡೆದು ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಎಂಬವರಿಗೆ ಮಹಿಳೆ ಸೇರಿ ಇನ್ನೂ ಮೂವರಿದ್ದ ಆ ಖತರ್ನಾಕ್ ತಂಡ ಡಿಸೆಂಬರ್ 18ರಂದು ವಂಚಿಸಿದ್ದು ಈ ಬಗ್ಗೆ ಪೊಲೀಸರು ಬೆಳಗಾವಿ ಮೂಲದ ಮಹಿಳೆ, ಇಂಡಿಯ ವಿಠ್ಠಲ ವಡ್ಡರ, ಮುರುಗೇಶ ಉಳ್ಳಾಗಡ್ಡಿ ಎನ್ನುವರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಲಿಂಗರಾಜ ಪರಾರಿ ಆಗಿದ್ದಾನೆ.
ಈ ಗುಂಪು ತನ್ನ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆಸಿ ಆರೋಪಿಗಳು ಖೆಡ್ಡಾಗೆ ತೋಡಿದ್ದರು. ಮಹಿಳೆಯ ಭೇಟಿಗೆ ಹೋಗಿದ್ದ ಉದ್ಯಮಿಯನ್ನು ಆರೋಪಿಗಳು ಆಕೆ ಜೊತೆಗಿದ್ದಾಗ ದಾಳಿ ನಡೆಸಿ ಧಮ್ಕಿ ಹಾಕಿದ್ದಾರೆ.
ಬಳಿಕ ನಾವು ಮಾಧ್ಯಮದವರು ನಿನ್ನ ವಿಡಿಯೋ ಪ್ರಸಾರ ಮಾಡುತ್ತೇವೆ ಎಂದು ಹೆದರಿಸಿ 24 ಸಾವಿರ ನಗದು, ಚಿನ್ನದ ಚೈನ್ ಹಾಗೂ ಚಿನ್ನದ ಕಡಗ ಕಿತ್ತುಕೊಂಡು ಪರಾರಿಯಾಗಿದ್ದರು.
ಉದ್ಯಮಿ ಸುನೀಲ್ ಈ ಕುರಿತು ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Comments are closed.