ಕರ್ನಾಟಕ

ಬೆಂಗಳೂರು: ರೌಡಿ ಶೀಟರ್ ಕೇಬಲ್ ವಿಜಿ ಬರ್ಬರ ಹತ್ಯೆ

Pinterest LinkedIn Tumblr


ಬೆಂಗಳೂರು: ಎರಡು ದಶಕಗಳ ಕಾಲ ಭೂಗತಲೋಕದಲ್ಲಿ ಮೆರೆದಾಡುತ್ತಿದ್ದ ರೌಡಿಶೀಟರ್ ಕೇಬಲ್ ವಿಜಿ ಹತನಾಗಿದ್ದಾನೆ. ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ 7 ಜನರ ಗ್ಯಾಂಗೊಂದು ಮಾರಕಾಸ್ತ್ರಗಳಿಂದ ರೌಡಿ ವಿಜಿಯನ್ನು ಕೊಚ್ಚಿ ಕೊಲೆಗೈದಿದ್ಧಾರೆ. ಲಕ್ಕಸಂದ್ರದ 16ನೇ ಕ್ರಾಸ್​ನಲ್ಲಿ ತನ್ನ ಕೇಬಲ್ ಆಫೀಸ್​ನಲ್ಲಿ ಇದ್ದ ವಿಜಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ. ರಾತ್ರಿ 9ಗಂಟೆಗೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಮಾರಕಾಸ್ತ್ರಗಳೊಂದಿಗೆ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಕೇಬಲ್ ಆಫೀಸ್​ಗೆ ನುಗ್ಗಿ ವಿಜಿಯನ್ನು ಹತ್ಯೆಗೈದಿದ್ದಾರೆ. ನಂತರ ಹೊರಹೋಗುವಾಗ ಎದುರಿಗೆ ಬಂದ ಮನೆಯ ಮಾಲೀಕ ಹಾಗೂ ಮತ್ತೋರ್ವ ಯುವಕನ ಮೆಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಆಡುಗೋಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡುಗೋಡಿ ಠಾಣೆಯಲ್ಲೇ ಪ್ರಕರಣ ದಾಖಲಾಗಿದೆ.

ಸೈಲೆಂಟ್ ಸುನಿಯ ಸಹವರ್ತಿಯಾಗಿದ್ದ ವಿಜಿ ಅಲಿಯಾಸ್ ಲಕ್ಕಸಂದ್ರ ವಿಜಿ ಅಲಿಯಾಸ್ ಕೇಬಲ್ ವಿಜಿ ವಿರುದ್ಧ ಹಲವು ಪ್ರಕರಣಗಳಿವೆ. ಕಡಬಗೆರೆ ಸೀನ ಶೂಟೌಟ್ ಕೇಸ್, ಡೈರಿ ಮಹೇಶ್ ಹತ್ಯೆ ಹೀಗೆ 9ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೇಬಲ್ ವಿಜಿ ಆರೋಪಿಯಾಗಿದ್ದ. ಮೈಕೋಲೇಔಟ್, ಆಡುಗೋಡಿ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗಳಲ್ಲಿ ವಿಜಿ ವಿರುದ್ಧ ಪ್ರಕರಣಗಳಿವೆ. ಕಡಬಗೆರೆ ಸೀನ ಪ್ರಕರಣದಲ್ಲಿ ಪೊಲೀಸರು ವಿಜಿಯನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಅಲೋಕ್ ಕುಮಾರ್ ಅವರು ಸಿಸಿಬಿಗೆ ಬಂದ ನಂತರ ಪೊಲೀಸರು ನಗರದ ಅನೇಕ ಕುಖ್ಯಾತ ರೌಡಿ ಶೀಟರ್​ಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಆಗ ಕೇಬಲ್ ವಿಜಿ ಮನೆಗೂ ಪೊಲೀಸರು ರೇಡ್ ಮಾಡಿ ಮಾರಕಾಸ್ತ್ರಗಳನ್ನ ಜಫ್ತಿ ಮಾಡಿದ್ದರು.

ಡೈರಿ ಮಹೇಶನ ಸಂಗಡಿಗರಾದ ನಾಗನ ಗ್ಯಾಂಗ್​ನವರು ಕೇಬಲ್ ವಿಜಿಯನ್ನು ಹತ್ಯೆಗೈದಿರಬಹುದೆಂಬುದು ಪೊಲೀಸರ ಶಂಕೆ. ಸದ್ಯ ಆಡುಗೋಡಿ ಪೊಲೀಸರು 7 ಆರೋಪಿಗಳ ತಲಾಶ್ ನಡೆಸಿದ್ದಾರೆ.

Comments are closed.