ಕರ್ನಾಟಕ

ಅಂಬಿ ಅಂತ್ಯಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ರೆಬೆಲ್​ ಸ್ಟಾರ್​ ಅಂಬರೀಷ್​ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್​ ಷರೀಫ್​ ಅವರ ಅಂತ್ಯಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ನಾನು ಆಭಾರಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಎಚ್​.ಡಿ.ಕುಮಾರಸ್ವಾಮಿ ಧನ್ಯವಾದ ಅರ್ಪಿಸಿದ್ದಾರೆ.

ರಾಜ್ಯ ಕಳೆದ ಮೂರು ದಿನಗಳಲ್ಲಿ ಕೇಂದ್ರದ ಇಬ್ಬರು ಮಾಜಿ ಸಚಿವರಾದ ಸಿ.ಕೆ ಜಾಫರ್ ಷರೀಫ್ ಹಾಗೂ ಅಂಬರೀಷ್ ಅವರ ನಿಧನದಿಂದ ಶೋಕತಪ್ತವಾಗಿದೆ. ಇಂಥ ದುಃಖದ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು, ಅನುಯಾಯಿಗಳನ್ನು ಹೊಂದಿದ ಈ ಇಬ್ಬರೂ ನಾಯಕರ ಅಂತ್ಯಕ್ರಿಯೆ ಅತ್ಯಂತ ಶಾಂತಿಯುತವಾಗಿ ನೆರವೇರಿದ್ದು ನಮ್ಮ ಜನರ ಸಹನಶೀಲತೆಗೆ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯ ಕಳೆದ ಮೂರು ದಿನಗಳಲ್ಲಿ ಕೇಂದ್ರದ ಇಬ್ಬರು ಮಾಜಿ ಸಚಿವರಾದ ಸಿ.ಕೆ ಜಾಫರ್ ಷರೀಫ್ ಹಾಗೂ ಅಂಬರೀಷ್ ಅವರ ನಿಧನದಿಂದ ಶೋಕತಪ್ತವಾಗಿದೆ.
ಇಂಥ ದುಃಖದ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು, ಅನುಯಾಯಿಗಳನ್ನು ಹೊಂದಿದ ಈ ಇಬ್ಬರೂ ನಾಯಕರ ಅಂತ್ಯಕ್ರಿಯೆ ಅತ್ಯಂತ ಶಾಂತಿಯುತವಾಗಿ ನೆರವೇರಿದ್ದು ನಮ್ಮ ಜನರ ಸಹನಶೀಲತೆಗೆ ಸಾಕ್ಷಿ.

ಅಂತ್ಯಕ್ರಿಯೆಗೆ ಇಬ್ಬರು ನಾಯಕರ ಅನುಯಾಯಿಗಳು, ಅಭಿಮಾನಿಗಳಿಗೆ ನಾನು ಆಭಾರಿಯಾಗಿದ್ದೇನೆ.ಈ ಸಂದರ್ಭದಲ್ಲಿ ಹಗಳಿರುಳೆನ್ನದೆ ಶ್ರಮಿಸಿ ಅಗಲಿದ ನಾಯಕರ ಅಂತ್ಯಕ್ರಿಯೆಯನ್ನು ಸಕಲಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಹಕರಿಸಿದ ಉಪಮುಖ್ಯಮಂತ್ರಿ @DrParameshwara, ಸಚಿವಸಂಪುಟದ ಸಹೋದ್ಯೋಗಿಗಳು,ಶಾಸಕರು, ಚಿತ್ರರಂಗದ ಗಣ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಇದಕ್ಕಾಗಿ ಹಗಲಿರುಳು ಶ್ರಮಿಸಿದ ಅಧಿಕಾರಿ ವರ್ಗ, ಪೊಲೀಸರು ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಮಂಡ್ಯದ ಜನತೆಗೆ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ ಮಂಡ್ಯ ಜಿಲ್ಲಾಡಳಿತಗಳ ಕಾರ್ಯತತ್ಪರತೆ ಶ್ಲಾಘನೀಯ ಎಂದಿದ್ದಾರೆ.

Comments are closed.