ಕರ್ನಾಟಕ

ಇಂದಿರಾ ಕ್ಯಾಂಟೀನ್ ಸಾಂಬಾರ್‌ಗೆ ಹೆಗ್ಗಣ ಹಾಕಿದ ಕಾರ್ಪೋರೇಟರ್‌ ಪತಿ ! ಕಾರಣ ಏನು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಸಾಂಬಾರ್‌ಗೆ ಗಾಯತ್ರಿ ನಗರ ವಾರ್ಡ್ ಕಾರ್ಪೊರೇಟರ್‌ವೊಬ್ಬರ ಪತಿ ಗಿರೀಶ್ ಲಕ್ಕಣ್ಣ ಹೆಗ್ಗಣ ಹಾಕಿರುವುದು ಬಹಿರಂಗಗೊಂಡಿದ್ದು, ಅವರ ವಿರುದ್ಧ ಚಿಫ್ ಟಾಕ್ ಕಂಪನಿಯು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

‘ನನಗೂ ಹಫ್ತಾ ಕೊಡಿ ಎಂದು ಆರೋಪಿ ಗಿರೀಶ್ ಲಕ್ಕಣ್ಣ ಇಂದಿರಾ ಕ್ಯಾಂಟೀನ್ ಗುತ್ತಿಗೆ ವಹಿಸಿಕೊಂಡಿದ್ದ ಕಂಪೆನಿಯ ಎಂಡಿಗೆ ಬೇಡಿಕೆಯಿಟ್ಟಿದ್ದರು. ಫೋನ್‌ ಮೂಲಕ ಗಿರೀಶ್ ಲಕ್ಕಣ್ಣ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದರು. ಇದಕ್ಕೆ ಕಂಪೆನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಕಪ್ಪು ಚುಕ್ಕೆ ತರಲು ಆರೋಪಿ ಸಾಂಬಾರ್‌ಗೆ ಹೆಗ್ಗಣ ಹಾಕಿ ಬ್ಲಾಕ್‌ಮೇಲ್‌ ಮಾಡಿದ್ದರು.

ಲ್ಯಾಬ್ ರಿಪೋರ್ಟ್‌ನಲ್ಲಿ ಹೆಗ್ಗಣ ಹಾಕಿರುವ ಮಾಹಿತಿ ಬಹಿರಂಗಗೊಂಡಿದೆ. ಆರೋಪಿ ಗಿರೀಶ್ ಲಕ್ಕಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎನ್ನಲಾಗಿದೆ.

Comments are closed.