ಕರ್ನಾಟಕ

ಲಾರಿ ಎತ್ತಿನ ಬಂಡಿಗೆ ಡಿಕ್ಕಿ : ಏಳು ಮಂದಿ ದುರ್ಮರಣ

Pinterest LinkedIn Tumblr


ಬಾಗಲಕೋಟೆ: ಅಮೀನಗಡ ಸಮೀಪದ ರಕ್ಕಸಗಿ ಗ್ರಾಮದ ಬಳಿ ವೇಗವಾಗಿ ಲಾರಿ ಎತ್ತಿನ ಬಂಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಎತ್ತಿನ ಬಂಡಿಯಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಂದ್ರಯ್ಯ ಹಿರೇಮಠ ( 48), ಪತ್ನಿ ರತ್ನವ್ವ (46), ಪುತ್ರಿಯರಾದ ಕಾಶಿಬಾಯಿ ( 22), ವಿಜಯಲಕ್ಷ್ಮಿ ( 18) ಹಾಗೂ ಗ್ರಾಮಸ್ಥರಾದ ಸಿದ್ದಮ್ಮ ಹೂಗಾರ ( 58), ಗಂಗಮ್ಮ ಹೂಗಾರ ( 58), ಬಸವ್ವ ಗೊರವರ ( 56) ಮೃತಪಟ್ಟವರು. ಸಂಗನಬಸವ್ವ ಮಠ (68) ಹಾಗೂ ಗಂಗಮ್ಮ ಗೌಡರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಲಕ್ಕೆ ಹೋಗಿದ್ದವರು ಸಂಜೆ ಮನೆಗೆ ಮರಳುವಾಗ ರಾಯಚೂರ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಯಮನಂತೆ ಲಾರಿ ಎರಗಿ ಬಂದ ರಭಸಕ್ಕೆ ಎತ್ತಿನ ಬಂಡಿಯಲ್ಲಿದ್ದವರಲ್ಲಿ ಎಳು ಮಂದಿ ಲಾರಿ ಅಡಿಗೆ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ.ಉಳಿದ ಇಬ್ಬರು ಬಂಡಿಯಿಂದ ಹೊರಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುನಗುಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

Comments are closed.