ಕರ್ನಾಟಕ

ಇಬ್ಬರು ಮಕ್ಕಳನ್ನು ದಹಿಸಿ ಬೆಂಕಿಗಾಹುತಿಯಾದ ತಾಯಿ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಇಬ್ಬರನ್ನು ಮಕ್ಕಳನ್ನು ಸಜೀವ ದಹಿಸಿದ ತಾಯಿಯೊಬ್ಬರು ತಾನೂ ಬೆಂಕಿಗೆ ಆಹುತಿಯಾಗಿದ್ದಾಳೆ.

ಸಂಜಯ ನಗರದಲ್ಲಿ ಘಟನೆ ನಡೆದಿದ್ದು, ತಾಯಿ ರಾಮಲಿಂಗಮ್ಮ, ನಾಲ್ಕು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗು ಸಜೀವ ದಹನವಾಗಿದೆ.

ತಾಯಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎನ್ನಲಾಗಿದೆ. ಸ್ಥಳಕ್ಕೆ ಎಚ್​ಎಎಲ್​ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Comments are closed.