ಕರ್ನಾಟಕ

ಗೌರಿಯನ್ನು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ, ಇನ್ನಷ್ಟು ಗೌರಿ ಹುಟ್ಟಲಿ: ಪ್ರಕಾಶ್‌ ರೈ

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಸಮಾಜದ ಒಳಿತಿಗಾಗಿ ಅತಿ ದೊಡ್ಡ ಧ್ವನಿಯಾಗಿದ್ದರು. ಆಕೆ ಮಡಿದಾಗ ಗೌರಿಯನ್ನು ನಾವು ಸಮಾಧಿ ಮಾಡಿಲ್ಲ. ಆಕೆಯನ್ನು ಬಿತ್ತಿದ್ದೇವೆ. ಇನ್ನಷ್ಟು ಗೌರಿಗಳು ಜನ್ಮ ತಳೆಯುತ್ತಾರೆ ಎಂದು ಹಿರಿಯ ನಟ ಪ್ರಕಾಶ್‌ ರೈ ಹೇಳಿದ್ದಾರೆ.

ಗೌರಿ ಲಂಕೇಶ್‌ 56ನೇ ಜನ್ಮದಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ನಾನು ಗೌರಿ ಕಾರ್ಯಕ್ರಮದಲ್ಲಿ ಪ್ರಕಾಶ್‌ ರೈ ಮಾತನಾಡಿದರು.

ರಾಕ್ಷಸರಿಗೆ ಒಂದು ವಿಷಯ ಅರ್ಥವಾಗುವುದಿಲ್ಲ. ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರು ಮಡಿದಾಗ ಸಮಾಧಿ ಮಾಡುವುದಿಲ್ಲ. ಅವರನ್ನು ಬಿತ್ತುತ್ತೇವೆ. ಅಂಥವರ ಧ್ವನಿ ಹೆಚ್ಚಾಗುತ್ತದೆ ಎಂದರು.

ಕೆಲವು ಮರಣಗಳೇ ಹಾಗೇ ಸಾಯುವುದಿಲ್ಲ. ದಲಿತರ ಮರಣ ಕಂಡಾಗ ಜಿಗ್ನೇಶ್‌ ಧ್ವನಿಯಾದರು. ಗೌರಿಯ ಸಾವಿನ ನಂತರ ನಾನು ಧ್ವನಿಯಾದೆ. ಈ ಧ್ವನಿ ಇನ್ನೂ ಹೆಚ್ಚಾಗುತ್ತದೆ ಎಂದು ಪ್ರಕಾಶ್‌ ರೈ ತಿಳಿಸಿದರು.

Comments are closed.