
ಬೆಂಗಳೂರು: ಸಾರ್ವಜನಿಕರಿಗೆ ತಲೆನೋವಾಗಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶರೀಫ್ ಹಾಗೂ ಇಮ್ರಾನ್ ಎಂಬುವರನ್ನು ಬಂಧಿಸಿರುವ ಪೊಲೀಸರು ಅವರಿಂದ 15 ಲಕ್ಷ ಮೌಲ್ಯದ 620 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಕಳೆದ ವಾರ ಶರೀಫ್ ಸರ ಕದಿಯಲು ಯತ್ನಿಸಿ ವಿಫಲನಾಗಿದ್ದ. ಆ ವೇಳೆ ಸಾರ್ವಜನಿಕರು ಅವನನ್ನು ಬೆನ್ನಟ್ಟಿಕೊಂಡು ಹೋಗಿದ್ದರು.
ಕೈಗೆ ಗಾಯ ಮಾಡಿಕೊಂಡಿದ್ದ ಶರೀಫ್ ಟೀ ಅಂಗಡಿಯೊಂದರಲ್ಲಿ ಕೈ ತೊಳೆದುಕೊಳ್ಳುತ್ತಿದ್ದ. ಈ ವೇಳೆ ಆತ ಸಿಕ್ಕಿ ಬಿದ್ದಿದ್ದ. ಆತನನ್ನು ಪೊಲೀಸರು ವಿಚಾರಣೆ ಮಾಡಿದಾಗ ಇಮ್ರಾನ್ ಬಗ್ಗೆ ಕೂಡ ಮಾಹಿತಿ ದೊರೆತಿದೆ. ಇದರ ಆಧಾರದ ಮೇಲೆ ಆತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 30 ಪ್ರಕರಣಗಳು ಬಯಲಿಗೆ ಬಂದಿವೆ. ಗಿರಿನಗರ ಪೊಲೀಸರು ಇಲ್ಲಿಯ ವರೆಗೆ ಒಟ್ಟು 19 ಸರಗಳ್ಳತನದ ಪ್ರಕರಣಗಳನ್ನು ಭೇದಿಸಿದ್ದಾರೆ.
Comments are closed.