ಕರ್ನಾಟಕ

ಸಚಿವ ಸೇಠ್ ಗೆ ರವಿ ಪೂಜಾರಿ ಧಮ್ಕಿ; 10 ಕೋಟಿ ರೂ.ಗೆ ಡಿಮ್ಯಾಂಡ್

Pinterest LinkedIn Tumblr


ಬೆಂಗಳೂರು:10 ಕೋಟಿ ರೂಪಾಯಿ ಹಫ್ತಾ ಕೊಡುವಂತೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಒಂದು ವಾರದೊಳಗೆ 10 ಕೋಟಿ ರೂಪಾಯಿ ಹಣ ಕೊಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ರವಿ ಪೂಜಾರಿ ಬೆದರಿಕೆ ಹಾಕಿರುವುದಾಗಿ ಸೇಠ್ ಹೇಳಿದ್ದಾರೆ.

ಆರಂಭದಲ್ಲಿ ನಾಲ್ಕು ಸಂದೇಶಗಳನ್ನು ಕಳುಹಿಸಿ, ನಾನು ರವಿ ಪೂಜಾರಿ ಆಪ್ತ ಎಂದು ಹೇಳಿ 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಸಂದೇಶ ಕಳುಹಿಸಿದ್ದರು. ಬಳಿಕ ಫೋನ್ ಕರೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

-ಉದಯವಾಣಿ

Comments are closed.