ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಕ್ತ ಹರಿದಿದೆ. ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ಕೊಲೆಯಾಗಿದೆ.
ಆಸ್ತಿ ವಿಚಾರಕ್ಕೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ನಡುವಿವ ಸಂಘರ್ಷ ಒಬ್ಬರ ಬಲಿಪಡಿದಿದೆ. ಕಸುವನಳ್ಳಿಯ ಶ್ರೀನಿವಾಸ್ನನ್ನ ಅವರ ಚಿಕ್ಕಪ್ಪನ ಮಕ್ಕಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.
ಶ್ರೀನಿವಾಸ್ ಅವರಿದ್ದ ನ್ಯಾನೋ ಕಾರಿಗೆ ಇಂಡಿಕಾದಿಂದ ಡಿಕ್ಕಿ ಹೊಡೆದು, ಆತ ಇಳಿಯುವ ವೇಳೆ ದಶರಥ ಮತ್ತು ಮಂಜುನಾಥ್ ತಲ್ವಾರ್ ಬೀಸಿ ಪರಾರಿಯಾಗಿದ್ದಾರೆ.
ಅತ್ತ ರಾಚೇನಹಳ್ಳಿಯಲ್ಲಿ ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ನಗರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಸ್ಸಾಂ ಮೂಲದ ಜೀವನ್ ದೇವ್ ಕೊಲೆಯಾದ ವ್ಯಕ್ತಿ.
ಈ ಸಂಬಂಧ ಜೀವನ್ ಅವರ ಜೊತೆ ವಾಸವಿದ್ದ ನಾಲ್ವರನ್ನ ಸಂಪಿಗೆಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜೀವನ್ ದೇವ್ ಮನೆಯ ಬಳಿ ಇರೋ ಸಿಸಿಟಿವಿ ವಿಡಿಯೋವನ್ನ ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Comments are closed.