ಬೆಂಗಳೂರು: ಬೆಂಗಳೂರಿನ ಅಧಿಕಾರಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 4 ಕೋಟಿಯಷ್ಟು ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾವೇರಿ ನಿಗಮನದ ಎಂಡಿ ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಿನ್ನೆಯೇ ದಾಳಿ ನಡೆಸಿದ್ದು ಗುರುವಾರವೂ ಪರಿಶೀಲನೆ ಮುಂದುವರೆಸಿದ್ದಾರೆ. ದಾಳಿ ವೇಳೆ ಇಬ್ಬರೂ ಅಧಿಕಾರಿಗಳ ಮನೆಯಲ್ಲಿ 2 ಸಾವಿರ ಮುಖಬೆಲೆಯ ಸುಮಾರು 4 ಕೋಟಿ ರುಪಾಯಿ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇವರಿಬ್ಬರಿಗೆ ಇಷ್ಟೊಂದು ಪ್ರಮಾಣದಲ್ಲಿ ಹೊಸ ನೋಟುಗಳು ಹೇಗೆ ಸಿಕ್ಕವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಎನ್ ಡಿಟಿವಿಗೆ ತಿಳಿಸಿದ್ದಾರೆ.
5ಕೆಜಿಗಿಂತ ಹೆಚ್ಚು ಚಿನ್ನ, ಆರು ಕೆಜಿ ಬೆಳ್ಳಿ ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲ ಕೋಟ್ಯಂತರ ರೂಪಾಯಿ ಬೆಲೆಯ 2ಲ್ಯಾಂಬೋರ್ ಗಿನಿ ಕಾರು, ಒಂದು ಬೈಕ್ ಅನ್ನು ಖರೀದಿಸಿರುವ ದಾಖಲೆ ಪತ್ರ ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.
Comments are closed.