ಕರ್ನಾಟಕ

ಮನೆ ಬಾಡಿಗೆ ಕೇಳಿದ ಮಾಲಕನ ಹತ್ಯೆ

Pinterest LinkedIn Tumblr

murderಚಿಕ್ಕಬಳ್ಳಾಪುರ: ಬಾಡಿಗೆಗೆ ಮನೆ ಬೇಕು ಅಂತ ಬಂದ ಆಗಂತುಕರು ಬಾಡಿಗೆ ಮನೆಯನ್ನ ತೋರಿಸುತ್ತಿದ್ದ ವೇಳೆ ಚಾಕುವಿನಿಂದ ಕತ್ತು ಕೊಯ್ದು ಮನೆ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಎಚ್ ಎಸ್ ಗಾರ್ಡನ್ ಬಡಾವಣೆಯ ನಿವಾಸಿ ಮುನಿಸ್ವಾಮಿ (50) ಕೊಲೆಯಾದ ವ್ಯಕ್ತಿ. ಬಾಡಿಗೆಗೆ ಮನೆ ಬೇಕು ಅಂತ ಬಂದ ಅನಾಮಿಕ ವ್ಯಕ್ತಿಗಳನ್ನ ಮುನಿಸ್ವಾಮಿ ಎಚ್ ಎಸ್ ಗಾರ್ಡನ್ ನ ಮತ್ತೊಂದು ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆ ಅಪರಿಚಿತರು ಮನೆಯ ಒಳಗಡೆಯೇ ಚಾಕುವಿನಿಂದ ಮುನಿಸ್ವಾಮಿ ಅವರ ಕತ್ತು ಕೊಯ್ದು ಹಾಗೂ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮಧ್ಯಾಹ್ನ ಬಾಡಿಗೆ ಮನೆ ತೋರಿಸಲು ಹೋದ ಮನೆಯ ಯಜಮಾನ ಎಷ್ಟೋತ್ತಾದರೂ ಮನೆಗೆ ವಾಪಾಸ್ ಬರಲಿಲ್ಲ ಅಂತ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮುನಿಸ್ವಾಮಿ ಅವರ ಕತ್ತಿನಲ್ಲಿದ್ದ ಸರ ಮಾಯವಾಗಿದ್ದು, ಚಿನ್ನಾಭರಣಕ್ಕಾಗಿ ಕೊಲೆ ಮಾಡಿರಬಹುದಾ ಎಂಬ ಅನುಮಾನ ಮೂಡಿದೆ. ಆದರೆ ಮುನಿಸ್ವಾಮಿ ಅವರ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಘಟನೆಯ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.