ಕರ್ನಾಟಕ

ಮೂರು ಪಕ್ಷ ಬದಲಿಸಿದ್ದೀರಿ, ಮುಂದಿನ ಸವಾರಿ ಎಲ್ಲಿಗೆ: ಸಿದ್ದುಗೆ ಈಶ್ವರಪ್ಪ

Pinterest LinkedIn Tumblr

eshwarappaಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗಾಗಲೇ ಮೂರು ಪಕ್ಷ ಬದಲಿಸಿದ್ದೀರಿ ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಮುಂದೆ ಯಾವ ಪಕ್ಷಕ್ಕೆ ಹೋಗುತ್ತೀರಾ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರನ್ನು ಸಿಎಂ ಮಾಡಿದ್ರೆ ನೀವು ಯಾವ ಪಕ್ಷಕ್ಕೆ ಹೋಗುತ್ತೀರಾ ಎಂದು ಕಾಲೆಳೆದರು.

ಅಹಿಂದ್ ಮಾಡಿದ್ರಿ ಅದನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದೀರಿ. ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವುದು ಬಿಟ್ಟು ಅವರಿಗಾಗಿ ಏನು ಮಾಡಿದ್ದೀರಿ ಎಂದು ಲೇವಡಿ ಮಾಡಿದರು.

ಈಶ್ವರಪ್ಪ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮುಂದೆ ಯಾವ ಪಕ್ಷಕ್ಕೂ ಹೋಗಲ್ಲ ಆದರೆ, ಆದರ್ಶ, ತತ್ವ ಸಿದ್ದಾಂತ, ವಿಚಾರಗಳನ್ನು ಕೈ ಬಿಡಲ್ಲ ಎಂದ ತಿರುಗೇಟು ನೀಡಿದರು.

Comments are closed.