ಕರ್ನಾಟಕ

ಶಿಕ್ಷಕನಿಂದ ವಿದ್ಯಾರ್ಥಿನಿಯ ಮೇಲೆ ಬಲತ್ಕಾರಕ್ಕೆ ಯತ್ನ

Pinterest LinkedIn Tumblr

rapeಬೈಲಕುಪ್ಪೆೆ: ತಾಲೂಕಿನ ಚೆನೆಕಲ್ ಗ್ರಾಮದಲ್ಲಿ ಮಂಗಳವಾರ ಅಪ್ರಾಪ್ತ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ ಬಲತ್ಕಾರ ಮಾಡಲು ಯತ್ನಿಸಿದ್ದಾನೆ.

ಚೆನೆಕಲ್ ಗ್ರಾಮದಲ್ಲಿನ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ್ ಬಲತ್ಕಾರ ಮಾಡಲು ಯತ್ನಿಸಿದವನು. ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯ ಬಾಗಿಲು ಮುಚ್ಚಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬಲತ್ಕಾರಕ್ಕೆೆ ಮುಂದಾಗಿದ್ದಾನೆ.

ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಹೇಳಿಕೊಂಡಾಗ ಗ್ರಾಮಸ್ಥರಿಗೆ ತಿಳಿಸಿದ ಆಕೆಯ ತಂದೆ, ಶಿಕ್ಷಕ ಚಂದ್ರಶೇಖರ್‌ನನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ನಂತರದಲ್ಲಿ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಬೆಟ್ಟದಪುರ ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆಯ ಮೇರೆಗೆ ದೂರು ದಾಖಲಿಸಿಕೊಂಡು ಶಿಕ್ಷಕನ ಪತ್ತೆಗಾಗಿ ಶೋಧನೆ ಕೈಗೊಂಡಿದ್ದಾರೆ.

Comments are closed.