ಕರ್ನಾಟಕ

ಇವು ನನ್ನ ಕೊನೆಯ ದಿನಗಳು, ನಿಮಗಾಗಿ ಪ್ರತಿಭಟಿಸುತ್ತೇನೆ: ದೇವೇಗೌಡ

Pinterest LinkedIn Tumblr

deಹಾಸನ: ಇವು ನನ್ನ ಕೊನೆಯ ದಿನಗಳು, ನಿಮಗಾಗಿ ಪ್ರತಿಭಟಿಸುತ್ತೇನೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವವರೆಗೂ ತಾಳ್ಮೆಯಿಂದಿರಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿಕೊಂಡಿದ್ದಾರೆ.

ಹೇಮಾವತಿ ಜಲಾಶಯದಿಂದ ಹೊರ ಹರಿವು ನಿಲ್ಲಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟು, ಮೇಲ್ಮನವಿ ಸಲ್ಲಿಸಿ ಎಂದು ಹೇಳಿರುವುದು ನಿಜ. ಆದರೆ, ಮಾಧ್ಯಮಗಳಿಂದ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಯುದ್ಧ ಸಾರುವುದು ಸರಿಯಲ್ಲ. ಜನತೆಯ ಉಳಿವಿಗಾಗಿ ಹೋರಾಡಬೇಕೇ ಹೊರತು ಅಧಿಕಾರಕ್ಕಾಗಲ್ಲ. ಸುಪ್ರೀಂ ನೀಡಿರುವ ತೀರ್ಪು ನೋವು ತಂದಿದೆ ಎನ್ನುತ್ತಾ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭಾವುಕರಾದರು.

Comments are closed.