ಪುದುಚೇರಿ: ಶೌಚಗೃಹ ನಿರ್ಮಾಣಕ್ಕೆ ಗ್ರಾಮವಾಸಿಗಳಿಗೆ ಉತ್ತೇಜನ ನೀಡಲು ಪುದುಚೇರಿಯ ಜಿಲ್ಲಾಧಿಕಾರಿ ಜಾಣತನದ ಹೆಜ್ಜೆಯೊಂದನ್ನು ಮುಂದಿಟ್ಟಿದ್ದಾರೆ. ಸಾರ್ವಜನಿಕ ಸೇವೆಯ ಉಪಯೋಗ ಪಡೆದವರಿಗೆ ಕಬಾಲಿ ಚಿತ್ರದ ಟಿಕೆಟ್ ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಅಭಿಯಾನದಡಿ ಪುದುಚೇರಿಯಲ್ಲಿ ಸುಮಾರು 55 ಸಾವಿರ ಶೌಚಗೃಹ ನಿರ್ಮಿಸಲು 120 ಕೋಟಿ ರೂ.ಗಳ ಯೋಜನೆಯನ್ನು ಪುದುಚೇರಿ ಸರ್ಕಾರ ಸಿದ್ಧ ಪಡಿಸಿದೆ.
ಸರ್ಕಾರದಿಂದ ಕೊಡುವ ಅನುಧಾನ ಉಪಯೋಗ ಮಾಡಿದವರಿಗೆ ಜಿಲ್ಲಾಧಿಕಾರಿ ಕಬಾಲಿ ಚಿತ್ರದ ಉಚಿತ ಟಿಕೆಟ್ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಟ್ವಿಟ್ ಮಾಡಿದ್ದಾರೆ. ಇದಲ್ಲದೆ ಈ ಯೋಜನೆಯ ರಾಯಭಾರಿಯಾಗುವಂತೆ ರಜನೀಕಾಂತ್ ಅವರಿಗೂ ಕೇಳಿಕೊಂಡಿದ್ದಾರೆ.
Comments are closed.