ಕರ್ನಾಟಕ

ಬಲ್ಗೇರಿಯಾಗೆ ಹಾರಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

Pinterest LinkedIn Tumblr

kuಬೆಂಗಳೂರು, ಜೂ.12- ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲುಂಡ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಬಂಡೆದ್ದು ಪಕ್ಷದ ಅಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾದ ಶಾಸಕರ ವಿರುದ್ಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಿಸ್ತುಕ್ರಮಕ್ಕೆ ಮುಂದಾಗಿದ್ದರೆ, ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಬಂಡಾಯ ಶಾಸಕರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು , ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬಲು ಪಕ್ಷದ ಪದಾಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಕೂಡ ನಡೆಸಿದರು.

ಆದರೆ ಕುಮಾರಸ್ವಾಮಿಯವರು ಪಕ್ಷದಲ್ಲಾಗುತ್ತಿರುವ ತೀವ್ರ ಬಿಕ್ಕಟ್ಟಿನ ಬೆಳವಣಿಗೆಗಳ ನಡುವೆಯೂ ತಮ್ಮ ಪುತ್ರ ನಿಖಿಲ್ ಗೌಡನ ಜಾಗ್ವಾರ್ ಚಿತ್ರದ ಚಿತ್ರೀಕರಣದ ಸಲುವಾಗಿ ಬಲ್ಗೇರಿಯಾಕ್ಕೆ ಹಾರಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ನಿಖಿಲ್ ಗೌಡರವರ ಜಾಗ್ವಾರ್ ಚಿತ್ರವನ್ನು ಮಹದೇವ್ ನಿರ್ದೇಶಿಸುತ್ತಿದ್ದು , ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟಿಸಿದೆ. ಈ ಚಿತ್ರದಲ್ಲಿ ಈಗಾಗಲೇ ಹಾಲಿವುಡ್‍ನ ಸಾಹಸ ನಿರ್ದೇಶಕರು ಕೆಲಸ ಮಾಡಿರುವುದಲ್ಲದೆ ಈಗ ವಿದೇಶಕ್ಕೆ ಹಾರಿರುವ ಚಿತ್ರತಂಡ ಮತ್ತಷ್ಟು ಸಂಚಲನ ಮೂಡಿಸಿದೆ. ಮೂಲಗಳ ಪ್ರಕಾರ ಎರಡು ವಾರಗಳ ಕಾಲ ಬಲ್ಗೇರಿಯಾದಲ್ಲೇ ಬೀಡು ಬಿಡಲಿರುವ ಜ್ವಾಗ್ವಾರ್ ಚಿತ್ರ ತಂಡ, ಒಂದು ಹಾಡು, ಕೆಲವು ದೃಶ್ಯಗಳ ಚಿತ್ರೀಕರಣ ಮತ್ತು ಒಂದು ಭರ್ಜರಿ ಫೈಟಿಂಗ್‍ನ್ನು ಚಿತ್ರೀಕರಿಸಲಿದೆ. ಇದಕ್ಕಾಗಿ ಇಂದು ಮುಂಜಾನೆ ತಮ್ಮ ಪುತ್ರನೊಂದಿಗೆ ಕುಮಾರಸ್ವಾಮಿ ಬಲ್ಗೇರಿಯಾಕ್ಕೆ ತೆರಳಿದರು ಎಂದು ಆಪ್ತ ಮೂಲಗಳು ತಿಳಿಸಿವೆ.

Comments are closed.