ಕರ್ನಾಟಕ

ಈಜಲು ಕೆರೆಗೆ ಇಳಿದ ಇಬ್ಬರು ಬಾಲಕರು ದುರ್ಮರಣ

Pinterest LinkedIn Tumblr

waterಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ದಾರುಣ ಘಟನೆ ಸಂಭವಿಸಿದೆ. ಆದಿತ್ಯ ಮತ್ತು ರವಿ ಎಂಬ 12 ವರ್ಷದ ಬಾಲಕರು ದುರಂತದಲ್ಲಿ ಮೃತಪಟ್ಟ ಬಾಲಕರು. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಢ ಸಂಭವಿಸಿದೆ.

ಇವರಿಬ್ಬರು ಶಾರದಾ ಹೈಸ್ಕೂಲಿನ ವಿದ್ಯಾರ್ಥಿಗಳಾಗಿದ್ದರು. ಇಂದು ಶಾಲೆಗೆ ರಜೆ ಇದ್ದಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಆಟವಾಡಲು ಕಳಿಸಿದ್ದರು.

ಈ ಮಕ್ಕಳು ಕೆರೆ ಬಳಿ ಆಡವಾಡಲು ಹೋಗಿದ್ದವರು ಈಜು ಸರಿಯಾಗಿ ಗೊತ್ತಿಲ್ಲದೇ ಕೆಲೆಯಲ್ಲಿ ಈಜಲು ಕೆರೆಯಲ್ಲಿ ಇಳಿದವರು ಶವವಾಗಿ ಹೊರಬಂದಿದ್ದಾರೆ.

Comments are closed.