ಬೆಂಗಳೂರು,ಜೂ.೧೨-ಕೊಲೆ ಕೊಲೆಯತ್ನ ಸುಲಿಗೆ ಇನ್ನಿತರ ಗಂಭೀರ ಪ್ರಮಾಣದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿಪಟ್ಟಿ ಸೇರಿರುವ ನೂರಕ್ಕೂ ಹೆಚ್ಚು ರೌಡಿಗಳಿಂದ ನಗರದಲ್ಲಿ ಇಂದು ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಮಾಗಡಿ ರಸ್ತೆಯ ಪೊಲೀಸ್ ವಸತಿಗೃಹದ ಬಳಿ ಬೆಳೆದಿದ್ದ ಪಾರ್ಥೇನಿಯಂ ಗಿಡ ಇನ್ನಿತರ ಕಸಕಡ್ಡಿಗಳನ್ನು ರೌಡಿಗಳು ತೆರವುಗೊಳಿಸಿ ಇಡೀ ಪ್ರದೇಶವನ್ನು ಸ್ವಚ್ಛ ಮಾಡಿದರು ರೌಡಿಗಳ ಮನ ಪರಿವರ್ತನೆ ಮಾಡುವ ಸಲುವಾಗಿ ಎಸಿಪಿ ಉಮೇಶ್ ಅವರು ರೌಡಿಗಳಿಂದ ಸ್ವಚ್ಛತಾ ಕಾರ್ಯ ನಡೆಸಿದರು.
ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಸಮಾಜದಲ್ಲಿ ಒಳ್ಳೆಯವರಾಗಿ ಜೀವನ ಸಾಗಿಸಿ ಇತರರಿಗೆ ಮಾದರಿಯಾಗುವಂತೆ ಮನುಷ್ಯತ್ವದಿಂದ ಬಾಳ್ವೆ ಮಾಡುವಂತೆ ಮನವಿ ಮಾಡಲಾಯಿತು.
Comments are closed.