ಕರ್ನಾಟಕ

ಕೋಲಾರ ಭಾಗದ ಬಯಲುಸೀಮೆಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ಚಿತ್ರರಂಗದ ಬೃಹತ್‌ ರೋಡ್‌ ಶೋ

Pinterest LinkedIn Tumblr

kolara

ಬೆಂಗಳೂರು: ಕೋಲಾರ ಭಾಗದ ಬಯಲುಸೀಮೆ ಶಾಶ್ವತ ಕುಡಿಯುವ ನೀರಿನ ಹೋರಾಟ ಬೆಂಬಲಿಸಿ ಭಾನುವಾರ ಕನ್ನಡ ಚಿತ್ರರಂಗ ಕೋಲಾರದಲ್ಲಿ ಬೃಹತ್‌ ಹೋರಾಟ ನಡೆಸುತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ಒಕ್ಕೂಟದ ಸದಸ್ಯರು ಹೋರಾಟದಲ್ಲಿ ಭಾಗವಹಿಸಿದ್ದಾರೆ.

ನಟರಾದ ಶಿವರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌ಉಪೇಂದ್ರ ,ಯಶ್‌, ಶೃತಿ , ಹಿರಿಯ ನಟ ದೊಡ್ಡಣ್ಣ ಪೂಜಾ ಗಾಂಧಿ , ರಾಕ್ ಲೈನ್ ವೆಂಕಟೇಶ್, ಸಾಧುಕೋಕಿಲ, ಸಾ.ರಾ. ಗೋವಿಂದು, ರಾಗಿಣಿ ಸೇರಿದಂತೆ ಪ್ರಮುಖರು ರೋಡ್‌ ಶೋನಲ್ಲಿ ಭಾಗಿಯಾಗಲಿದ್ದಾರೆ.

ಯಶ್, ರಾಕ್ ಲೈನ್ ವೆಂಕಟೇಶ್, ಸಾಧುಕೋಕಿಲ, ಸಾ.ರಾ. ಗೋವಿಂದು, ನಟಿಯರಾದ ಪೂಜಾ ಗಾಂಧಿ, ರಾಗಿಣಿ ದ್ವಿವೇದಿ ಸೇರಿ ಹಲವು ನಟ ನಟಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ನಟರನ್ನು ನೋಡಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Comments are closed.