ಕರ್ನಾಟಕ

ಟ್ಯಾಂಕರ್ ಹರಿದು ಟೆಕ್ಕಿ ಸಾವು

Pinterest LinkedIn Tumblr

9rakheshಬೆಂಗಳೂರು,ಜೂ.೯-ವೇಗವಾಗಿ ಬಂದ ಟ್ಯಾಂಕರ್ ಹರಿದು ರಸ್ತೆ ದಾಟುತ್ತಿದ್ದ ಕೇರಳ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಸ್ಥಳದಲ್ಲೇ ಮೃತ ಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿಯ ಜಿಎಸ್ ಪಾಳ್ಯದ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕೊನಪ್ಪನ ಅಗ್ರಹಾರದ ರಾಕೇಶ್ (೨೫) ಮೃತಪಟ್ಟವರು ಟೆಕ್ ಮಹೇಂದ್ರ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರಾಕೇಶ್ ರಾತ್ರಿ ೯:೩೦ರ ವೇಳೆ ಕೆಲಸ ಮುಗಿಸಿಕೊಂಡು ಸ್ನೇಹಿತನನ್ನು ಭೇಟಿಯಾಗಲು ಜಿಎಸ್ ಪಾಳ್ಯದ ಸರ್ವೀಸ್ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಚಾಲಕ ಟ್ಯಾಂಕರ್ ಸಮೇತ ಪರಾರಿಯಾಗಲು ಮುಂದಾದಾಗ ಸಂಚಾರಿ ಪೇದೆಯೊಬ್ಬರು ಹಿಂಬಾಲಿಸಿ, ಚಾಲಕ ಹಾಗೂ ಟ್ಯಾಂಕರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.