ಕರ್ನಾಟಕ

ತಡೆಗೋಡೆಗೆ ಬೈಕ್ ಡಿಕ್ಕಿ : ಕಾಫಿ ಡೇ ಮ್ಯಾನೇಜರ್ ಸಾವು

Pinterest LinkedIn Tumblr

ambulanceಬೆಂಗಳೂರು,ಜೂ.೫-ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಕಾಫಿ ಡೇ ಮ್ಯಾನೇಜರ್‌ರೊಬ್ಬರು ಮೇಲುಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ರಾಮಮೂರ್ತಿನಗರದ ಕಸ್ತೂರಿನಗರದ ಬಳಿ ಇಂದು ನಸುಕಿನಲ್ಲಿ ನಡೆದಿದೆ.
ಕಲ್ಯಾಣನಗರದ ಇಸಾಕ್‌ದಾಸ್(೩೫)ಮೃತಪಟ್ಟವರಾಗಿದ್ದಾರೆ,ವಿಠ್ಠಲಮಲ್ಯ ರಸ್ತೆಯ ಕಾಫಿ ಡೇ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಇಸಾಕ್ ದಾಸ್ ಅವರು ರಾತ್ರಿ ಪಾಳದಲ್ಲಿ ಕೆಲಸ ಮುಗಿಸಿಕೊಂಡು ಮುಂಜಾನೆ ೪.೩೦ರ ವೇಳೆ ರಾಮಮೂರ್ತಿನಗರದ ಕಡೆಯಿಂದ ಕಲ್ಯಾಣನಗರದ ಮನೆಗೆ ಹೀರೋ ಹೊಂಡಾ ಬೈಕ್‌ನಲ್ಲಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಕಸ್ತೂರಿನಗರದ ಬಳಿ ಮೇಲುಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಪ್ರಕರಣ ದಾಖಲಿಸಿಕೊಮಡಿರುವ ಕೆಆರ್‌ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.