ಬೆಳಗಾವಿ: ಮಹಾದಾಯಿ ಹೋರಾಟ ಅಂಗವಾಗಿ ಮಲಪ್ರಭಾ ನದಿಗೆ ಸಂಪರ್ಕ ಕಲ್ಪಿಸುವ ಕೊಸಾಂವ್ಬಾಯಿ ನಾಲಾಗೆ ಅಡ್ಡ ಕಟ್ಟಿರುವ ತಡೆಗೋಡೆ ಶನಿವಾರ ಒಡೆದಿರುವುದಾಗಿ ಹೋರಾಟಗಾರ ಗಿರೀಶ ಮಟ್ಟೆಣ್ಣವರ ಹೇಳಿದ್ದಾರೆ.
ಕಣಕುಂಬಿ ಬಳಿ ಇರುವ ಕಳಸಾ ತಡೆಗೋಡೆಯನ್ನು ಬೆಳಗಿನ ಜಾವ 2 ರಿಂದ 5 ರವರೆಗೆ ಕಾರ್ಯಾಚರಣೆ ನಡೆಸಿ ಒಡೆಯಲಾಗಿದೆ ಎಂದು ಮಟ್ಟೆಣ್ಣವರ ತಿಳಿಸಿದ್ದಾರೆ.
ಆದರೆ, ಕಳಸಾ ತಡೆಗೋಡೆ ಒಡೆದಿದ್ದು ಬರಿ ವದಂತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೆಗೌಡ ತಿಳಿಸಿದ್ದಾರೆ.