ಕರ್ನಾಟಕ

ಸಂಪುಟ ಪುನರಚನೆ ವೇಳೆ ನನ್ನನ್ನು ಕೈಬಿಟ್ಟರೂ ಸಂತೋಷ: ಅಂಬರೀಷ್

Pinterest LinkedIn Tumblr

Ambarish

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳೊಳಗೆ ಸಂಪುಟ ಪುನರಚನೆ ಮಾಡುತ್ತೇವೆ. ಪುನರಚನೆ ವೇಳೆ ಕೆಲವು ಸಚಿವರನ್ನು ಕೈಬಿಡಲಾಗುವುದು ಎಂದು ಹೇಳಿದ ಮಾರನೆ ದಿನವೇ ವಸತಿ ಸಚಿವ ಅಂಬರೀಷ್ ಅವರು, ಸಂಪುಟ ಪುನರಚನೆ ವೇಳೆ ನನ್ನನ್ನು ಕೈಬಿಟ್ಟರೂ ಸಂತೋಷ. ಸಚಿವನಾಗಿ ಮುಂದುವರೆಸಿದರೂ ಸಂತೋಷ ಎಂದು ಹೇಳುವ ಮೂಲಕ ಸಚಿವ ಸ್ಥಾನ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿರುವ ಸೂಚನೆ ನೀಡಿದ್ದಾರೆ.

ಇಂದು ಮಂಡ್ಯದಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅಂಬರೀಷ್, ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಟ್ಟರೂ ಸಂತೋಷ, ಮುಂದುವರೆಸಿದರು ಸಂತೋಷ ಎಂದರು.

ನಾನು ಈ ಹಿಂದೆ ಖಳನಟನಾಗಿ 400 ರುಪಾಯಿ ಸಂಭಾವನೆ ಪಡೆಯುತ್ತಿದ್ದೆ, ಆದರೆ ಕಾಂಗ್ರೆಸ್ ಪಕ್ಷ ನನ್ನನ್ನು ದೆಹಲಿ ಹಾಗೂ ರಾಜ್ಯದಲ್ಲಿ ಕೆಂಪು ಗೂಟದ ಕಾರಿನಲ್ಲಿ ಓಡಾಡುವಂತೆ ಮಾಡಿದೆ. ಅಷ್ಟೇ ಸಾಕು ನನಗೆ. ಈಗ ನಾನು ಸಚಿವ ಸಂಪುಟದಲ್ಲಿ ಇದ್ದರೂ ಅಷ್ಟೇ ಬಿಟ್ಟರು ಅಷ್ಟೇ ಎಂದು ಅಂಬರೀಷ್ ಹೇಳಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ಕೆಲವು ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ವರದಿಗಳು ಬಂದಾಗ ಅಂಬರೀಷ್ ಅವರ ಹೆಸರು ಸಹ ಪ್ರಮುಖವಾಗಿ ಕೇಳಿ ಬಂದಿತ್ತು.

Write A Comment