ಮಂಡ್ಯ: ಡೆತ್ ನೋಟ್ ಬರೆದಿಟ್ಟು ಮದುವೆ ನಿಶ್ಚಯವಾಗಿದ್ದ ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶೃತಿ(25) ಆತ್ಮಹತ್ಯೆಗೆ ಶರಣಾದ ಯುವತಿ. ಎಂಟೆಕ್ ಮಾಡಿಕೊಂಡು ಎಂಜಿನಿಯರಿಂಗ್ ಕಾಲೇಜ್ನಲ್ಲಿ ಉಪನ್ಯಾಸಕಿಯಾಗಿದ್ದ ಶೃತಿಯ ಮದುವೆ ಮಾರ್ಚ್ 27 ರಂದು ನಡೆಯಬೇಕಿತ್ತು. ಆದರೆ ಇದೀಗ ಆಕೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹುತ್ತೇಶ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುತ್ತೇಶ್ ಮದುವೆಗೆ ಮುಂಚೆ ಮನೆಯವರಿಂದ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದರಂತೆ, ಅಲ್ಲದೇ ಯುವತಿ ಮಾರ್ಡನ್ ಆಗಿಲ್ಲವೆಂದು ನಿಂದನೆಮಾಡಿದ್ದನಂತೆ.
ಇದೆಲ್ಲದರಿಂದ ಮನನೊಂದು ಮಾರ್ಚ್ 17 ರಂದು ವಿಷ ಸೇವಿಸಿದ್ದ ಶೃತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ. ಡೆತ್ ನೋಟ್ನಲ್ಲಿ ದೇವರನ್ನು ಪ್ರಶ್ನಿಸಿರುವ ಆಕೆ ಸುಮಾರು 15 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಈ ಸಂಬಂಧ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.