ಮಾಲೂರು, ಮಾ.21- ನೆರೆಯ ಆಂಧ್ರದಿಂದ ಯುವತಿಯರನ್ನು ಕರೆ ತಂದು ಬಲವಂತವಾಗಿ ನಂಗಾನಾಚ್ ನಡೆಸುತ್ತಿದ್ದ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆಸಿರುವ ಪೊಲೀಸರು 7 ಯುವತಿಯರನ್ನು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೊರ ವಲಯದಲ್ಲಿರುವ ಜಿ.ಆರ್.ರೆಸಾರ್ಟ್ ಮೇಲೆ ನಿನ್ನೆ ರಾತ್ರಿ ದಾಳಿ ನಡೆಸಿದ ವಿಶೇಷ ಪೊಲೀಸ್ ಅಧಿಕಾರಿಗಳ ತಂಡ ನಂಗಾನಾಚ್ನಲ್ಲಿ ತೊಡಗಿದ್ದ 7 ಯುವತಿಯರನ್ನು ರಕ್ಷಿಸಿ ಹೈದರಾಬಾದ್ ಮೂಲದ ನಾಲ್ವರನ್ನು ಬಂಧಿಸಿದ್ದಾರೆ.
ಹೈದರಾಬಾದ್ನ ಖಾಸಗಿ ಕಂಪೆನಿಯೊಂದು ಈ ಪಾರ್ಟಿಯನ್ನು ಆಯೋಜಿಸಿತ್ತು ಎನ್ನಲಾಗಿದ್ದು , ಪಾರ್ಟಿಯಲ್ಲಿ ತೊಡಗಿದ್ದ ನಾಗರಾಜ್, ನೀರಜ್, ಕ್ರಾಂತಿಕುಮಾರ್, ಮಾರವಲ್ಲಿ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥನ್ ತಿಳಿಸಿದ್ದಾರೆ. ಪಾರ್ಟಿಯನ್ನು ಯಾವ ಕಾರಣಕ್ಕೆ ಆಯೋಜಿಸಲಾಗಿತ್ತು. ನಂಗಾನಾಚ್ನಲ್ಲಿ ತೊಡಗಿದ್ದ ಯುವತಿಯರನ್ನು ಬಲವಂತವಾಗಿ ಕರೆ ತರಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.