ಬೆಂಗಳೂರು,ಮಾ.೧೯-ಪೆಟ್ರೋಲ್ ಬಂಕ್ನಿಂದ ಬ್ಯಾಂಕಿಗೆ ಹಣ ಕಟ್ಟಲು ಬೈಕ್ನಲ್ಲಿ ಹೋಗುತ್ತಿದ್ದ ಕ್ಯಾಷಿಯರ್ ಸೇರಿ ಇಬ್ಬರನ್ನು ಹಾಡುಹಗಲೇ ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ೨೧ ಲಕ್ಷ ೪೧ ಸಾವಿರ ಹಣವಿದ್ದ ಬ್ಯಾಗ್ನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ತುಮಕೂರು ರಸ್ತೆಯ ಜಿಂದಾಲ್ ಬಳಿ ನಡೆದಿದೆ.
ಹಲ್ಲೆಯಿಂದ ಕ್ಯಾಷಿಯರ್ ವೆಂಕಟರಮಣ ಅವರ ಕೈ ಬೆರಳು ತುಂಡಾಗಿದೆ.ಜಿಂದಾಲ್ ಎಲಿವೇಟೆಡ್ ಮೇಲುಸೇತುವೆ ಬಳಿ ಗಟ್ಟಿ ಪೆಟ್ರೋಲ್ ಬಂಕ್ನಿಂದ ವೆಂಕಟರಮಣ ಹಾಗೂ ನಾಗಪ್ಪ ಬೆಳಿಗ್ಗೆ ೧೦.೪೦ರ ವೇಳೆ ೨೧ ಲಕ್ಷ ೪೧ ಸಾವಿರ ಹಣವನ್ನು ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿ ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ ಪ್ರಕರಣ ದಾಖಲಿಸಿರುವ ಮಾದನಾಯ್ಕನಹಳ್ಳಿ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.