ಕರ್ನಾಟಕ

ಹಾವೇರಿ ಗೋಲಿಬಾರ್‌ ವರದಿ ತಿರಸ್ಕೃತ

Pinterest LinkedIn Tumblr

haveriಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ “ಹಾವೇರಿ ಗೋಲಿಬಾರ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಕೆದಂಬಾಡಿ ಜಗನ್ನಾಥಶೆಟ್ಟಿ ವಿಚಾರಣಾ ಆಯೋಗ
ಸಲ್ಲಿಸಿದ್ದ ವರದಿಯ ಶಿಫಾರಸು ಗಳನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ.

ಹಾವೇರಿ ಗೋಲಿಬಾರ್‌ ಪ್ರಕರಣದಲ್ಲಿ ಸತ್ತವನು ರೈತನೇ ಅಲ್ಲ, ಅದು ಗೊಬ್ಬರಕ್ಕಾಗಿ ನಡೆದ ಘರ್ಷಣೆಯಲ್ಲ, ರಾಜಕೀಯ ಕಾರಣಗಳಿಗಾಗಿ ನಡೆದದ್ದು ಎಂದು ವರದಿಯಲ್ಲಿ ತಿಳಿಸಿರುವುದರಿಂದ
ಶಿಫಾರಸು ತಿರಸ್ಕರಿಸಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಆಗ ಸರ್ಕಾರವೇ ಘಟನೆಯಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚೆನ್ನಪ್ಪ ಚೂರಿ ರೈತ ಎಂಬುದನ್ನು ಒಪ್ಪಿಕೊಂಡಿದೆ. ಜತೆಗೆ ಆತನ ಕುಟುಂಬಕ್ಕೆ ಅದೇ ಆಧಾರದ ಮೇಲೆ ಪರಿಹಾರವನ್ನೂ ಸಹ ನೀಡಲಾಗಿದೆ. ಹೀಗಿರುವಾಗ ಆತ ರೈತನೇ ಅಲ್ಲ, ಗೊಬ್ಬರಕ್ಕಾಗಿ ಗಲಾಟೆ ನಡೆದಿಲ್ಲ ಎಂದು ಶಿಫಾರಸು
ಮಾಡಿರುವುದರಿಂದ ಸಂಪುಟದಲ್ಲಿ ಚರ್ಚಿಸಿ ತಿರಸ್ಕರಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.
ಹಾಗಾದರೆ ಆ ಘಟನೆಯ ಬಗ್ಗೆ ಮುಂದೇನು ಎಂಬ ಪ್ರಶ್ನೆಗೆ, ಸಂಪುಟ ಸಭೆಯು ಶಿಫಾರಸು ತಿರಸ್ಕರಿಸುವ ತೀರ್ಮಾನ ಕೈಗೊಂಡಿದೆ. ಸದನದಲ್ಲಿ ಅದನ್ನು ಮಂಡಿಸಿ ತಿರಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಅಷ್ಟೆ ಎಂದರು.
-ಉದಯವಾಣಿ

Write A Comment