ಕರ್ನಾಟಕ

ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ ಹುಚ್ಚ ವೆಂಕಟ್‌ !

Pinterest LinkedIn Tumblr

huccha

ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಹುಚ್ಚ ವೆಂಕಟ್‌ಗೆ ಬೇಡಿಕೆ ಹೆಚ್ಚಾಗತೊಡಗಿದೆ. ನಿನ್ನೆ ಮೊನ್ನೆ “ಪರಪಂಚ” ಚಿತ್ರದಲ್ಲಿ ಹಾಡು ಹಾಡಿದ್ದ ವೆಂಕಟ್ ಈಗ “ಅಳಿಲುಗಳ ಅಳಲು” ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಅತಿಥಿ ಕಲಾವಿದರಾಗುತ್ತಿದ್ದಾರೆ.

ಗೋವಿಂದರಾಜು ಮಧುಗಿರಿ ನಿರ್ದೇಶನದ ಈ ಚಿತ್ರಕ್ಕೆ ವೇಣು ಗೋಪಾಲ್ ಬಂಡವಾಳ ಹಾಕಲು ಮುಂದಾಗಿದ್ದಾರೆ.ಬಾಲಕಾರ್ಮಿಕರ ಕುರಿತಾದ ಚಿತ್ರದ ಬಹುತೇಕ ಭಾಗದ ಚಿತ್ರೀಕರಣವನ್ನು ನಿರ್ದೇಶಕರು ತಮ್ಮ ಊರಾದ ಮಧುಗಿರಿಯ ಸುತ್ತ ಮತ್ತಲೇ ಚಿತ್ರೀಕರಿಸಲು ನಿರ್ಧರಿಸಿದ್ದಾರೆ.

ಚಿತ್ರದ ಆರಂಭದ ಬಗ್ಗೆ ಹೇಳಿಕೊಳ್ಳಲು ಕಳೆದ ವಾರ ಚಿತ್ರ ತಂಡ ಪತ್ರಿಕಾಗೋಷ್ಟಿ ಕರೆದಿತ್ತು. ಮೊದಲು ಮಾತಿಗಿಳಿದ ನಿರ್ದೇಶಕ ಗೋವಿಂದರಾಜ್, ಇದು ಬಾಲ ಕಾರ್ಮಿಕ ಮಕ್ಕಳ ಕುರಿತಾಗಿದೆ ಮಕ್ಕಳನ್ನು ಶಾಲೆಗೆ ಕಳುಹಿಸಿ ದುಡಿಮೆಗೆ ಬೇಡ ಎನ್ನುವ ಸಂದೇಶವನ್ನು ತಂದೆ ತಾಯಿಯರಿಗೆ ಚಿತ್ರದ ಮೂಲಕ ನೀಡಲಾಗುತ್ತಿದೆ ಬಾಲ ದುಡಿಮೆ ಅಪರಾಧ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.ಜೊತೆಗೆ ರೈತರ ಬಗ್ಗೆಯೂ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಾಡೊಂದರಲ್ಲಿ ಹುಚ್ಚವೆಂಕಟ್ ಕಾಣಿಸಿಕೊಳ್ಳಲಿದ್ದಾರೆ ಜೊತೆಗೆ ಹಾಡೊಂದನ್ನು ಅವರೇ ಹಾಡಲಿದ್ದಾರೆ.

ಚಿತ್ರದ ಶೀರ್ಷಿಕೆ ಹೇಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಮುಂದಿನ ವಾರದಿಂದ ಚಿತ್ರೀಕರಣ ನಡೆಯಲಿದೆ, ಸದ್ಯದಲ್ಲಿಯೇ ಚಿತ್ರದ ಮುಖ್ಯ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದು ವಿವರ ನೀಡಿದರು ನಿರ್ದೇಶಕರು.

ನಿರ್ಮಾಪಕ ವೇಣುಗೋಪಾಲ್,ನಿರ್ದೇಶಕರು ಬಹಳ ವರ್ಷದ ಸ್ನೇಹಿತರು ಅವರು ಮಾಡಿಕೊಂಡ ಕಥೆ ಇಷ್ಟವಾಯಿತು ಹಾಗಾಗಿ ಬಂಡವಾಳ ಹಾಕಲು ಮುಂದಾಗಿದ್ದೇನೆ ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಎಂದರು. ಕ್ಯಾಮರಾಮನ್ ಚೌಹ್ಹಾಣ್,ಸಂಗೀತ ನಿರ್ದೇಶಕ ಗುರುಮೂರ್ತಿ ಚಿತ್ರದ ಬಗ್ಗೆ ವಿವರ ನೀಡಿದರು.

Write A Comment