ಕರ್ನಾಟಕ

ಹೆಸರು ಬದಲಾದ ‘ಸ’

Pinterest LinkedIn Tumblr

JK

ಮತ್ತೊಮ್ಮೆ ಶ್… ಚಿತ್ರದ ಹೆಸರು “ಸ” ಎಂದು ಬದಲಾಗಿದೆ.ಅದಕ್ಕೆ ಚಿತ್ರ ತಂಡ ತನ್ನದೇ ಆದ ಕಾರಣ ಮತ್ತು ಸಮಜಾಯಿಷಿ ನೀಡಿದೆ.

ಶ್ ಹೆಸರಿನ ಹಿಂದೆ ಮುಂದೆ ಹತ್ತಾರು ಚಿತ್ರಗಳಿಗೆ ವಾಣಿಜ್ಯ ಮಂಡಳಿ ಅನುಮತಿ ನೀಡಿತ್ತು ಹಾಗಾಗಿ ನಾವೂ ಅದರಲ್ಲಿ ಒಬ್ಬರಾಗುವುದು ಬೇಡ ಎಂದು “ಸ” ಎಂದು ಹೆರಿಟ್ಟಿದ್ದೇವೆ. ಚಿತ್ರ ಸಂಪೂರ್ಣ ಮುಗಿದಿದ್ದು ಸದ್ಯದಲ್ಲಿಯೇ ಮೊದಲ ಪ್ರತಿ ಕೈ ಸೇರಲಿದೆ ಆ ಬಳಿಕ ಚಿತ್ರ ಬಿಡುಗಡೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಮಾತಿಗಿಳಿದರು ನಿರ್ದೇಶಕ ಹೇಮಂತ್ ಹೆಗಡೆ.

ಇದೊಂದು ಸಸ್ಪನ್ಸ್ ಮತ್ತು ಥ್ರಿಲ್ಲರ್ ಚಿತ್ರ.ಚಿತ್ರಕ್ಕೆ ಯಾಕಾಗಿ “ಸ” ಎಂದು ಹೆಸರಿಟ್ಟಿದ್ದೇವೆ ಎನ್ನುವುದು ಚಿತ್ರ ನೋಡಿದ ಮೋಲೆ ತಿಳಿಯಲಿದೆ ಸಕಲೇಶಪುರ, ಮೈಸೂರು, ಬೆಂಗಳೂರು ಮತ್ತಿತರ ಕಡೆ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡರು.ನಟ ಜೆ.ಕಾರ್ತಿಕ್, ಚಿತ್ರದಲ್ಲಿ ಪಕ್ಷಿ ಅಧ್ಯಯನ ಮಾಡುವ ವ್ಯಕ್ತಿಯ ಪಾತ್ರ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದರೆ ಮತ್ತೊಬ್ಬ ನಟ ವಿಜಯ್ ಸೂರ್ಯ, ಅವರೇ ಲೀಡ್ ಇವರೇ ಲೀಡ್ ಎಂದು ಹೇಳಲು ಬರುವುದಿಲ್ಲ ಸಸ್ಪನ್ಸ್ ಆಗಿರುವುದರಿಂದ ಕಥೆಯ ಎಳೆ ಹೇಳಲು ಆಗುವುದಿಲ್ಲ ಎಂದರು.

ನಿರ್ಮಾಪಕ ಉದಯ್ ಶೆಟ್ಟಿ ಚಿತ್ರದ ಮೇಲೆ ಸಂಪೂರ್ಣ ನಂಬಿಕೆ ಇದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು. ಸಹಕಲಾವಿದ ಬಾಲಾಜಿ ಸೇರಿದಂತೆ ಮತ್ತಿತರಿದ್ದರು.

Write A Comment