ಕಲಬುರಗಿ: ಸ್ವಾಮೀಜಿಯೊಬ್ಬರಿಗೆ ಬಿದ್ದ ಕನಸು ನನಸಾಗಿ ಸ್ವಪ್ನದಲ್ಲಿ ಕಂಡ ಶಿವಮೂರ್ತಿಗಳು ಜಮೀನೊಂದರಲ್ಲಿ ಪತ್ತೆಯಾಗಿರುವ ಅಪರೂಪದ ಘಟನೆ ಕಲಬುರಗಿಯ ಗೌರ್ ಗ್ರಾಮದಲ್ಲಿ ನಡೆದಿದೆ. ಕೈಲಾಸ ಲಿಂಗೇಶ್ವರ ಮಠದ ಶಿವಾಚಾರ್ಯ ಸ್ವಾಮೀಜಿಯವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡಿದ್ದ ಶಿವಮೂರ್ತಿಗಳು ಶಿವಪ್ಪ ದಫೇದಾರ ಅವರ ಜಮೀನಿನಲ್ಲಿ ಇದೆ ಎಂದು ಹೇಳಿದರೂ ಗ್ರಾಮಸ್ಥರು ನಂಬಿರಲಿಲ್ಲ. ಇದರಿಂದ ವಿಚಲಿತರಾದ ಸ್ವಾಮೀಜಿ ಸ್ವತಃ ಗುದ್ದಲಿ ಹಿಡಿದು ನೆಲ ಅಗೆಯಲು ಆರಂಭಿಸಿದ್ದರು.
ಆಗ ಗ್ರಾಮಸ್ಥರು ಕೈಜೋಡಿಸಿ ಆ ಸ್ಥಳವನ್ನು ಅಗೆಯುತ್ತಿದ್ದಂತೆ ಭೂಗರ್ಭದಲ್ಲಿ ಶಿವಮೂರ್ತಿ, ನಾಗಮೂರ್ತಿಗಳು ಗೋಚರಿಸಿವೆ. 20ಕ್ಕೂ ಹಚ್ಚು ಅಡಿ ಅಗೆದ ನಂತರ ಹಲವಾರು ಶಿವಮೂರ್ತಿಗಳು ಪತ್ತೆಯಾದವು. ಶಿವಾಚಾರ್ಯ ಸ್ವಾಮೀಜಿಗಳು ಶಿವಪ್ಪ ದಫೇದಾರ ಅವರ ಜಮೀನಿನಲ್ಲಿ ನಡೆದು ಹೋಗುತ್ತಿದ್ದಾಗ ಈ ಸ್ಥಳದಲ್ಲಿ ಎಡವಿ ಬಿದ್ದಿದ್ದರು. ನಂತರ ಫೆ.24ರಂದು ಸ್ವಾಮೀಜಿಗಳ ಕನಸಿನಲ್ಲಿ ಶಿವಮೂರ್ತಿಗಳು ಕಾಣಿಸಿಕೊಂಡಿದ್ದವು. ಇದರಿಂದಾಗಿ ಆ ಸ್ಥಳದಲ್ಲಿ ಶಿವಮೂರ್ತಿಗಳಿಗಾಗಿ ಹುಡುಕಾಟ ನಡೆಸಿದಾಗ ಪುರಾತನ ಕಾಲದ ಶಿವಮೂರ್ತಿಗಳು, ನಾಗಮೂರ್ತಿ ಸೇರಿದಂತೆ ಇನ್ನಿತರ ಮೂರ್ತಿಗಳು ಪತ್ತೆಯಾಗಿ ಅಚ್ಚರಿ ಮೂಡಿಸಿವೆ.