ಕರ್ನಾಟಕ

ಕದ್ದ ಬೈಕ್ ಗಳಿಂದ ಸರಗಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ : 4.50 ಲಕ್ಷ ರೂ. ಆಭರಣ ವಶ

Pinterest LinkedIn Tumblr

kallaಬೆಂಗಳೂರು, ಮಾ.10- ಮೋಟಾರ್ ಬೈಕ್‌ಗಳನ್ನು ಕಳ್ಳತನ ಮಾಡಿ ಅವುಗಳನ್ನು ಬಳಸಿಕೊಂಡು ಸರಗಳನ್ನು ಎಗರಿಸುತ್ತಿದ್ದ ನಾಲ್ವರು ಸರಗಳ್ಳರನ್ನು ಉತ್ತರ ವಿಭಾಗದ ಯಶವಂತಪುರ ಪೊಲೀಸರು ಬಂಧಿಸಿ 4.50 ಲಕ್ಷ ರೂ. ಮೌಲ್ಯದ ಚಿನ್ನಾಬರಣ, 8 ಮೊಬೈಲ್, ಬೈಕ್ ವಶಪಡಿಸಿಕೊಂಡಿದ್ದಾರೆ.

ನವೀನ್(25), ಕುಮಾರ(24), ಅರುಣ (23) ಮತ್ತು ಅಣ್ಣಪ್ಪ ಬಂಧಿತ ಸರಗಳ್ಳರಾಗಿದ್ದು, ಇವರಿಂದ 125 ಗ್ರಾಂ ತೂಕದ 4 ಚಿನ್ನದ ಸರಗಳು, 8 ಮೊಬೈಲ್, ಬೈಕ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಯಶವಂತಪುರದ ಎರಡು ಪ್ರಕರಣ, ಜಾಲಹಳ್ಳಿ, ರಾಮಮೂರ್ತಿನಗರ, ಯಶವಂತಪುರ ಠಾಣೆ ವ್ಯಾಪ್ತಿಯ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ. 2015ನೇ ಸಾಲಿನಲ್ಲಿ ನಡೆದಿದ್ದ ರಾಮಮೂರ್ತಿನಗರ, 2016ನೇ ಸಾಲಿನ ಜನವರಿ ಮತ್ತು ಫೆಬ್ರುವರಿಯಲ್ಲಿ ಯಶವಂತಪುರ, ಜಾಲಹಳ್ಳಿ ಠಾಣಾ ಸರಹದ್ದಿನಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ, ಮೋಟಾ ಬೈಕ್ ಕಳ್ಳತನ ಪತ್ತೆಯಾದಂತಾಗಿದೆ. ಯಶವಂತಪುರ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣ, ಪಿಎಸ್‌ಐಗಳಾದ ವೆಂಕಟೇಶ್, ರಾಜಾರಾಮ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment