ಕರ್ನಾಟಕ

ತಾಕತ್ತಿದ್ದರೆ ನನ್ನ ಬಾಯ್ ಫ್ರೆಂಡ್ ಯಾರು ಎಂದು ಸಾಬೀತುಪಡಿಸಲಿ: ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಸವಾಲು

Pinterest LinkedIn Tumblr

Vijayalakshmi and actor Darshan address the media during a press conference in Bangalore on Sunday. –KPN

ಬೆಂಗಳೂರು: ತಾಕತ್ತಿದ್ದರೇ ನನ್ನ ಬಾಯ್ ಫ್ರೆಂಡ್ ಯಾರು ಎಂಬುದನ್ನು ಸಾಬೀತು ಪಡಿಸಲಿ ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸವಾಲು ಹಾಕಿದ್ದಾರೆ.

ಪ್ರಕರಣ ಸಂಬಂಧ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯಲಕ್ಷ್ಮಿ, ನನ್ನ ವಿರುದ್ಧ ದರ್ಶನ್ ಮಾಡಿರುವ ಆರೋಪಗಳೆಲ್ಲಾ ಶುದ್ದ ಸುಳ್ಳು ಎಂದು ಹೇಳಿದ್ದಾರೆ. ಆರೋಪ ಮಾಡಿರುವಂತಹ ವ್ಯಕ್ತಿತ್ವ ನನ್ನದಲ್ಲ. ನಾನು ಏನು ಎಂದು ಎಲ್ಲರಿಗೂ ಗೊತ್ತಿದೆ. ದರ್ಶನ್ ಮನೆಯ ಕೆಲಸದವರನ್ನೇ ಕೇಳಿ. ಕಳೆದ ಒಂದೂವರೆ ವರ್ಷದಿಂದ ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ನಾನು ಮನೆಯಿಂದ ಬರುವಾಗ ಆಡಿ ಕಾರು ಜೊತೆಗೆ ತಂದಿದ್ದೆ ಎಂದು ಹೇಳಿರುವ ವಿಜಯಲಕ್ಷ್ಮಿ ಬಾಯ್ ಫ್ರೆಂಡ್ ವಿಚಾರ ಏಕೆ ಬಂತೊ ಗೊತ್ತಿಲ್ಲ ಎಂದು ನೊಂದು ನುಡಿದಿದ್ದಾರೆ.

ನನ್ನ ಮತ್ತು ನನ್ನ ಮಗನ ಸುರಕ್ಷತೆಯೇ ಮುಖ್ಯ. ಹೀಗಾಗಿ ನಿನ್ನೆ ಸಂಜೆ ಬಂದು ಅಪಾರ್ಟ್ ಮೆಂಟ್ ಬಳಿ ಗಲಾಟೆ ಮಾಡಿದ್ದಕ್ಕಾಗಿ ನಾನು ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ ದರ್ಶನ್ ವಿರುದ್ಧ ಬೇರೆ ಯಾವ ಆರೋಪಗಳನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಮತ್ತು ಪತಿಯ ನಡುವೆ ಹಲವು ಭಿನ್ನಾಭಿಪ್ರಾಯಗಳಿವೆ. ನನ್ನ ಮಗನನ್ನು ರಕ್ಷಿಸುವ ಅಗತ್ಯವಿದೆ. ಅವನ ಭವಿಷ್ಯ ರೂಪಿಸುವ ಜವಾಬ್ದಾರಿ ನನ್ನ ಮೇಲಿದೆ. ಅವನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕೆಂದು ನನ್ನ ಉದ್ದೇಶ, ದರ್ಶನ್ ಜೊತೆ ನಿರಂತರ ಜಗಳದಿಂದ ತುಂಬಾ ನೊಂದಿದ್ದೇನೆ. ಹೀಗಾಗಿ ಅವರನ್ನು ಕರೆಸಿ ಬುದ್ದಿ ಹೇಳಿ ಎಂದು ಮಾತ್ರ ಠಾಣೆಯಲ್ಲಿ ಹೇಳಿರುವುದಾಗಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

Write A Comment