ಮೈಸೂರು, ಮಾ.6- ಅವಧೂತ ದತ್ತಪೀಠವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಪೆಂಡಾಲ್ನಲ್ಲಿ ಸಾವಿರಾರು ಮಂದಿ ಹನುಮಾನ್ ಚಾಲೀಸ ಬೃಹತ್ ಪಾರಾಯಣ ಯಜ್ಞದಲ್ಲಿ ಪಾಲ್ಗೊಂಡಿದ್ದರು.
ಗಣಪತಿ ಸಚ್ಚಿದಾನಂದ ಸ್ವಾಮಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ರಾಮತಾರಕ ಹೋಮ, ಆಂಜನೇಯ ಹೋಮ ನಡೆದ ನಂತರ ವೇದಿಕೆಯಲ್ಲಿ ಹನುಮಾನ್ಚಾಲೀಸ ಪಾರಾಯಣ ನಡೆಯಿತು.
ಇದರಲ್ಲಿ ಆಶ್ರಮದ ಹಿರಿಯ ಸ್ವಾಮೀಜಿ ದತ್ತ ವಿಜಯಾನಂದ, ಪ್ರೊ.ಬಾಷ್ಯಂ, ಜ್ಯೋತಿಷಿಗಳಾದ ನರೇಂದ್ರ ಬಾಬು ಶರ್ಮ, ಭಾನುಪ್ರಕಾಶ್, ಮಾಜಿ ಸಚಿವ ರಾಮದಾಸ್, ಮೇಯರ್ ಬೈರಪ್ಪ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ದೇಶ-ವಿದೇಶಗಳಿಂದ ಪಾಲ್ಗೊಂಡಿದ್ದ 20 ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.