ಕರ್ನಾಟಕ

ಅಂಗವಿಕಲ ಯುವಕನ ಬರ್ಬರ ಕೊಲೆ

Pinterest LinkedIn Tumblr

crime_graphic_web1ಶಹಾಪುರ: ಅಂಗವಿಕಲ ಯುವಕನೊರ್ವನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತಾಲೂಕಿನ ಗುರಸಣಗಿ ಗ್ರಾಮದ ಕ್ರಾಸ್ ಹತ್ತಿರ ನೆಡೆದಿದೆ.

ಯಾದಗಿರಿಯಲ್ಲಿ ವಾಸವಾಗಿದ್ದ ಅಂಗವಿಕಲ ಅಯ್ಯಪ್ಪ ದೊಡಮನಿ (35) ಎಂಬುವರು ಕೊಲೆಯಾದ ವ್ಯಕ್ತಿ. ಎಂದಿನಂತೆ ತನ್ನ ಸ್ವಗ್ರಾಮ ಗುರಸಣಿಗಿಗೆ ಹೋಗುವ ಮಾರ್ಗ ಮಧ್ಯೆ ಕ್ರಾಸ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಕಿದ್ದಾರೆ. ಮೃತ ವ್ಯಕ್ತಿ ಕತ್ತಿಗೆ ತೀವೃ ಗಾಯವಾದ ಗುರುತುಗಳಿದ್ದು, ಹಳೆ ವೈಷಮ್ಯವೇ ಕೊಲೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನೆಡೆಸಿದ್ದು, ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment