ಕರ್ನಾಟಕ

ಅತಿ ವೇಗ ಚಾಲನೆ–ತಾಂಜೇನಿಯಾ ವಿದ್ಯಾರ್ಥಿ ಸಾವು

Pinterest LinkedIn Tumblr

Crime-2-2ಬೆಂಗಳೂರು, ಫೆ. ೪ – ಸ್ಕೂಟರ್‌ನಲ್ಲಿ ವೇಗವಾಗಿ ಮನೆಗೆ ತೆರಳುತ್ತಿದ್ದ ತಾಂಜೇನಿಯಾ ಮೂಲದ ಪದವಿ ವಿದ್ಯಾರ್ಥಿಯೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಬಾಗಲೂರಿನ ಭೈರತಿ ಬಂಡೆ ಬಳಿ ನಡೆದಿದೆ.

ಕೋಶಿಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಕ್ರಿಶ್ಚಿಯನ್ ಬೆಂಜಮಿನ್ (೩೪) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಬಂಡೆ ಹೊಸೂರಿನಲ್ಲಿ ವಾಸಿಸುತ್ತಿದ್ದ ಬೆಂಜಮಿನ್ ನಿನ್ನೆ ಮಧ್ಯಾಹ್ನ ೩.೩೦ ವೇಳೆ ಕಾಲೇಜು ಮುಗಿಸಿಕೊಂಡು ಮನೆಗೆ ಸ್ಕೂಟರ್‌ನಲ್ಲಿ ವೇಗವಾಗಿ ಹೋಗುತ್ತಿದ್ದ.

ಮಾರ್ಗಮಧ್ಯೆ ಭೈರತಿ ಬಂಡೆ ಬಳಿ ಆಯತಪ್ಪಿ ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರೇಣುಕಾ ಅವರು ತಿಳಿಸಿದ್ದಾರೆ.

Write A Comment