ಕರ್ನಾಟಕ

ಬಳ್ಳಾರಿ ಬಳಿ ರಸ್ತೆ ಅಪಘಾತ 3 ಸಾವು

Pinterest LinkedIn Tumblr

accident_ಬಳ್ಳಾರಿ: ಶಬರಿಮಲೈ ಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಕ್ರೂಸರ್ ವಾಹನ ಕೂಡ್ಲಿಗೆ ಸಮೀಪ ಬಣವಿಕಲ್ಲು ಬಳಿ ಅಪಘಾತಕ್ಕೀಡಾಗಿ ಸ್ಥಳದಲ್ಲೆ ಮೂವರು ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ.

ಎದುರಿನಿಂದ ಬಂದ ಲಾರಿ ಮತ್ತು ಕ್ರೂಸರ್​ಗೆ ಮುಖಾಮುಖಿ ಢಿಕ್ಕಿಯಾಗಿದೆ. ಮೃತರನ್ನು ಬಸವರಾಜ(35), ಮುದುಕಪ್ಪ(45), ತಿಮ್ಮಣ್ಣ(35) ಎಂದು ಗುರುತಿಸಲಾಗಿದೆ.

ಮೂಲತಃ ಬಾಗಲಕೋಟ್ ಜಿಲ್ಲೆ ಭಗವತಿ ಗ್ರಾಮದವರು. ಗಾಯಗೊಂಡವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment