ಕರ್ನಾಟಕ

ನಮ್ಮನ್ನು ಒಡೆಯುವ ಕೆಲಸ ಮಾಡಬೇಡಿ: ಎಚ್ ಡಿಕೆ

Pinterest LinkedIn Tumblr

hdk-newನನ್ನ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ನಡುವೆ ಬೆಂಕಿ ಹಚ್ಚಲು ಯಾರಿಂದಲೂ ಸಾಧ್ಯವಿಲ್ಲ. ಆಗಾಗಲು ನಾನು ಬಿಡಲ್ಲ. ಜೆಡಿಎಸ್ ಪಕ್ಷ ಒಡೆದ್ರೆ, ರಾಜ್ಯ ಒಡೆದಂತಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ರಾಮನಗರದ ಮಾಗಡಿಯಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೈಸೂರಿನಲ್ಲಿ ಏನು ಮಾತನಾಡಿದ್ದೇನೆ ಎಂಬ ರೆಕಾರ್ಡ್ ನನ್ನ ಬಳಿ ಇದೆ. ಆದರೆ ನೀವು ನಮ್ಮನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಾ? ಟಿಆರ್ ಪಿಗಾಗಿ ತೋರಿಸ್ತೀರಾ ತೋರಿಸಿ. ಇದರಿಂದ ರಾಜ್ಯಕ್ಕೆ ನಷ್ಟವೇ ಹೊರತು ಜೆಡಿಎಸ್ ಪಕ್ಷಕ್ಕಲ್ಲ. ಕರ್ನಾಟಕದ ಉಳಿವು, ರೈತರ ಉಳಿವಿನ ಬಗ್ಗೆ ಯೋಚಿಸಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.

ಯಾವ ಕಾರಣಕ್ಕಾಗಿ ರಾಷ್ಟ್ರೀಯ ಪಕ್ಷಗಳನ್ನು ಓಲೈಸ್ತಾ ಇದ್ದೀರಾ? ಮೇಲ್ಮನೆ ಕಾಂಗ್ರೆಸ್ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಏಜೆಂಟ್ ಹೇಳಿಕೆಯನ್ನು ತಿರುಚಿದ್ದೀರಿ ಎಂದು ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Write A Comment