ಕರ್ನಾಟಕ

ಬದಲಾವಣೆಗೆ ಹೋರಾಟ ಅಗತ್ಯ: ಸ್ಪೀಕರ್ ಕಾಗೋಡು

Pinterest LinkedIn Tumblr

speaker____ಬೆಂಗಳೂರು,ನ.20: ‘ಸಮಾಜದಲ್ಲಿ ಆಮೂಲಾಗ್ರ ಬದಲಾ ವಣೆ ಬರಬೇಕಾದರೆ ಆಂದೋಲನ ಅತ್ಯಗತ್ಯ’ ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಮೇಲಿನ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಯಾವುದೇ ಹೋರಾಟವಿಲ್ಲದೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ನಾನು ಕೂಡ ಹೋರಾಟದ ಆಸೆಯನ್ನು ಕೈಬಿಟ್ಟಿದ್ದೇನೆ ಎಂದರು.

‘ಹೋರಾಟ ಅಂದ್ರೆ ಜೈಲು, ಅನ್ಯಾಯ ಬಯಲು’ ಎಂದು ನುಡಿದ ಅವರು, ಸುಧಾರಕ ಬಸವಣ್ಣ ಈ ಸಮಾಜದ ಬದಲಾ ವಣೆಗಾಗಿ ಹೋರಾಟ ನಡೆಸಿದ. ಆದರೆ, ಆತನ ಹೆಸರಿನಲ್ಲಿಂದು ನೂರಾರು ಮಠ-ಮಾನ್ಯಗಳು ಹುಟ್ಟಿಕೊಂಡಿವೆ ಎಂದು ಅವರು ಆಕ್ಷೇಪಿಸಿದರು.

Write A Comment