ಮಂಡ್ಯ,ನ.15: ಸಿಬಿಐ ವಶದಲ್ಲಿರುವ ಭೂಗತ ಪಾತಕಿ ಛೋಟಾರಾಜನ್ ತನ್ನ ಪಾಸ್ಪೋರ್ಟ್ನಲ್ಲಿ ನೀಡಿರುವ ಮಂಡ್ಯ ವಿಳಾಸ ನಕಲಿಯಾಗಿದೆ ಎಂದು ಎಸ್ಪಿ ಭೂಷಣ್ ಜಿ.ಬೊರಸೆ ತಿಳಿಸಿದರು. ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಶಿವಪ್ಪ ಅವರ ಮನೆಯಲ್ಲಿ ಡಕಾಯಿತಿ ನಡೆಸಿದ್ದ 12 ಜನರ ಬಂಧನ ಕುರಿತು ಮಾಹಿತಿ ನೀಡಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಛೋಟಾರಾಜನ್ ತನ್ನ ಬಳಿ ಮೋಹನ್ಕುಮಾರ್ ಬಿನ್ ಧಾಮೋಧರ್, ಶಂಕರ್ನಗರ, ಮಂಡ್ಯ ವಿಳಾಸದ ಪಾಸ್ಪೋರ್ಟ್ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಿಬಿಐ ಅಧಿಕಾರಿಗಳು ನಗರಕ್ಕೆ ಬಂದು ವಿಳಾಸ ಪರಿಶೀಲನೆ ಮಾಡಿದಾಗ ಅದು ನಕಲಿ ವಿಳಾಸ ಎಂದು ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದರು.