ಕರ್ನಾಟಕ

6 ವರ್ಷದ ಬಾಲಕಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ

Pinterest LinkedIn Tumblr

baby

ಬಳ್ಳಾರಿ: ಕಲ್ಲಿನಿಂದ ತಲೆ ಜಜ್ಜಿ ಆರು ವರ್ಷದ ಬಾಲಕಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಸಂಡೂರಿನಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮೀಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಸವನ ಗೌಡ ಮತ್ತು ವಾಣಿ ದಂಪತಿಯ ಪುತ್ರಿ ಮಾನಸ ಮೃತಪಟ್ಟ ಬಾಲಕಿ. ನಿನ್ನೆ ಮಧ್ಯಾಹ್ನದಿಂದ ಬಾಲಕಿ ನಾಪತ್ತೆಯಾಗಿರುತ್ತಾಳೆ. ಇಂದು ಬೆಳಿಗ್ಗೆ ಶವವಾಗಿ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದ್ದಾಳೆ.

ಬಾಲಕಿಯನ್ನು ಬೇರೆಡೆ ಹತ್ಯೆಗೈದಿರುವ ದುಷ್ಕರ್ಮಿಗಳು, ಮನೆಯ ಹಿಂಭಾಗದಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಗೂಡೆಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment