ಕರ್ನಾಟಕ

ನಡುರಸ್ತೆಯಲ್ಲೇ ಪತ್ನಿಯನ್ನು ಕೊಚ್ಚಿ ಕೊಂದ ಕಟುಕ ಪತಿರಾಯ

Pinterest LinkedIn Tumblr

Murder (1)

ಮೈಸೂರು,ಸೆ.21: ಪರಸ್ಪರರ ನಡುವಿನ ಅನುಮಾನದಿಂದ ದಂಪತಿ ನಡುವೆ ನಡೆಯುತ್ತಿದ್ದ ಜಗಳ ರಸ್ತೆಯಲ್ಲೂ ಮುಂದುವರೆದು ಗಂಡನೆ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್.ನಗರ ತಾಲ್ಲೂಕಿನ ಮುಂದೂರು ಗ್ರಾಮದ ಚೈತ್ರಾ(22) ಗಂಡನಿಂದಲೇ ಹತ್ಯೆಯಾದ ನತದೃಷ್ಟೆ. ಮಹದೇವ ಹಾಗೂ ಚೈತ್ರಾ 4 ವರ್ಷಗಳ ಹಿಂದೆ ವಿವಾಹವಾಗಿದ್ದು, ನಡತೆ ಬಗ್ಗೆ ಪರಸ್ಪರರಲ್ಲಿ ಅನುಮಾನದಿಂದ ಜಗಳವಾಗುತ್ತಿತ್ತು ಎನ್ನಲಾಗಿದೆ.

ನಿನ್ನೆಯೂ ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದ್ದು, ಸಂಜೆ ವೇಳೆಗೂ ಮುಂದುವರೆದಿದೆ. ಮಹದೇವ ಪತ್ನಿಯನ್ನು ತವರಿಗೆ ಬಿಡಲು ಕರೆದೊಯ್ಯುವಾಗ ರಸ್ತೆಯಲ್ಲೂ ಜಗಳವಾಗಿದೆ.

ಕೋಪದ ಭರದಲ್ಲಿ ತನ್ನ ಬಳಿಯಿದ್ದ ಮಚ್ಚಿನಿಂದ ನಡುರಸ್ತೆಯಲ್ಲೇ ಪತ್ನಿಯನ್ನು ಕೊಚ್ಚಿಕೊಂದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.ಸಾಲಿಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment