ಕರ್ನಾಟಕ

ಬಿಬಿಎಂಪಿ ಗದ್ದುಗೆ ಗುದ್ದಾಟದ ಮಧ್ಯೆ ಡಿಕೆಶಿ ಭೇಟಿ ಮಾಡಿದ ಇಬ್ಬರು ಬಿಜೆಪಿ ಕಾರ್ಪೊರೇಟರ್‌ಗಳು

Pinterest LinkedIn Tumblr

dikeshi

ಬೆಂಗಳೂರು, ಸೆ.8: ಬಿಜೆಪಿಯ ಇಬ್ಬರು ಪಾಲಿಕೆ ಸದಸ್ಯರು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿವೆ. ಮಾರೇನಹಳ್ಳಿ ವಾರ್ಡ್ ಸದಸ್ಯೆ ಮಧುಕುಮಾರಿ ಅವರ ಪತಿ ವಾಗೀಶ್ ಮತ್ತು ಹಂಪಿ ನಗರ ವಾರ್ಡ್‌ನ ಆನಂದ್ ಇಬ್ಬರು ಸದಸ್ಯರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಇಬ್ಬರು ಸದಸ್ಯರು ಯಾವ ಕಾರಣಕ್ಕಾಗಿ ಸಚಿವರನ್ನು ಭೇಟಿ ಮಾಡಿದ್ದರು ಎಂಬುದರ ಬಗ್ಗೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ, ವಾರ್ಡ್‌ನ ಕೆಲವು ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇವೆಯೇ ಹೊರತು, ರಾಜಕಾರಣದ ಬಗ್ಗೆ ಚರ್ಚಿಸಲು ಅಲ್ಲ ಎಂದು ಮಾಜಿ ಪಾಲಿಕೆ ಸದಸ್ಯ ವಾಗೀಶ್ `ಸಂಜೆವಾಣಿ`ಗೆ ತಿಳಿಸಿದ್ದಾರೆ.

ಅದೇನೇ ಇದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನಡುವೆ ಬಿಜೆಪಿ ಸದಸ್ಯರ ಈ ಭೇಟಿ ಹಲವು ಊಹಾ-ಪೋಹಗಳನ್ನು ಉಂಟು ಮಾಡಿದೆ.

Write A Comment