ಕರ್ನಾಟಕ

ಬಿಬಿಎಂಪಿ ಚುನಾವಣೆ: ಶೇ.35 ಮತದಾನ, ನೀರಸ ಪ್ರತಿಕ್ರಿಯೆ

Pinterest LinkedIn Tumblr

voting

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 197 ವಾರ್ಡ್‌ಗಳಿಗೆ ಶನಿವಾರ ಮತದಾನ ನಡೆದಿದೆ. ಇದುವರೆಗೆ ಸಿಕ್ಕ ಮಾಹಿತಿಯಂತೆ ಸುಮಾರು ಶೇ.35ರಷ್ಟು ಮತದಾನವಾಗಿದ್ದು, ನಗರದ ಪ್ರಜ್ಞಾವಂತ ಮತದಾರರು ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ಬೆಳಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 5ಕ್ಕೆ ಮುಗಿದಿದೆ, ಅಲ್ಲಿ ಇಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುವತವಾಗಿತ್ತು.

voting1234

voting123

voting12

voting1

ಎರಡು ಸಾವು ಮತದಾನದ ಭರಾಟೆಯಲ್ಲಿ ಎರಡು ಸಾವುಗಳು ಸಂಭವಿಸಿವೆ. ಶಿವಾಜಿನಗರದಲ್ಲಿ ಮತ ಚಲಾಯಿಸಲು ತೆರಳುತ್ತಿದ್ದ 22 ವರ್ಷದ ಯುವಕನ ತಲೆ ಮೇಲೆ ಮರದ ಕೊಂಬೆ ಬಿದ್ದು ಮೃತಪಟ್ಟರೆ, ವೃಷಭಾವತಿ ನಗರದಲ್ಲಿ ಮತ ಚಲಾಯಿಸಿದ ನಂತರ 70 ವರ್ಷದ ವೃದ್ಧ ನಾರಾಯಣಪ್ಪ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವಿವಿಧೆಡೆ ಮತ ಪೆಟ್ಟಿಗೆ ಭದ್ರ: ವಿವಿಧ ಪಕ್ಷಗಳ 1,121 ಅಭ್ಯರ್ಥಿಗಳ ಹಣೆ ಬರಹ ಅಡಗಿರುವ ಮತಪೆಟ್ಟಿಗೆಗಳನ್ನು ನಗರದ ವಿವಿಧೆಡೆ ಗುರುತಿಸಿರುವ ಒಟ್ಟು 27 ಕೇಂದ್ರಗಳಲ್ಲಿ, ಬಿಗಿ ಭದ್ರತೆಯೊಂದಿಗೆ ಇರಿಸಲಾಗುತ್ತದೆ.

ಇಬ್ಬರು ಮಾಜಿ ಮೇಯರ್‍ಗಳು, ಮಾಜಿ ಮೇಯರ್‍ಗಳ ಪತ್ನಿಯರು, 20ಕ್ಕೂ ಹೆಚ್ಚು ರಾಜಕಾರಣಿಗಳ ಕುಟುಂಬದ ಸದಸ್ಯರು, 13 ಮಾಜಿ ಕಾರ್ಪೊರೇಟರ್‍ಗಳ ಪತ್ನಿಯರು, ಇಬ್ಬರು ಶಾಸಕರ ಪುತ್ರರು ಹಾಗೂ 30 ಮಾಜಿ ಕಾರ್ಪೊರೇಟರ್‍ಗಳು ಚುನಾವಣಾ ಕಣದಲ್ಲಿದ್ದರು.

ಹಂಪಿ ನಗರ ವಾರ್ಡ್‍ನಲ್ಲಿ ಗಾಯತ್ರಿ ಎಂಬ ಮಂಗಳಮುಖಿ ಕಣದಲ್ಲಿದ್ದು ಗಮನ ಸೆಳೆದಿದ್ದಾರೆ. ಈಗಾಗಲೇ ಹೊಂಗಸಂದ್ರ ವಾರ್ಡ್‌ನಿಂದ ಬಿಜೆಪಿಯ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಬೃಹತ್ ಚುನವಣೆ ಹೈಲೈಟ್ಸ್
– ಯಶವಂತಪುರ ಕ್ಷೇತ್ರದ ವೀರಣ್ಣಪಾಳ್ಯದಲ್ಲಿ ಮತದಾನ ಬಹಿಷ್ಕಾರ. ಮೂಲಸೌಕರ್ಯ ಇಲ್ಲ ಎಂದು ಮತದಾನ ಬಹಿಷ್ಕರಿಸಿರುವ ಜನರು ಬ್ಯಾನರ್‌ ಕಟ್ಟಿ ಪ್ರತಿಭಟಿಸಿದರು.
– ಜೀವನ್‌ಬಿಮಾ ನಗರದ ಬೂತ್‌ ನಂ 115ರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಹಿರಂಗ ಪ್ರಚಾರ.
– ಜೆಸಿ ನಗರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತದಾನ
-ಸುಭಾಷ್‌ನಗರ ವಾರ್ಡ್‌ನಲ್ಲಿ ಗಲಾಟೆ. ಪೊಲೀಸರಿಂದ ಲಾಠಿ ಚಾರ್ಜ್‌.
– ಪಕ್ಷದ ಕಾರ್ಯಕರ್ತರಿಗೆ ನೈತಿಕ ಬೆಂಬಲ ನೀಡಲು ಜೀವನ್‌ಬಿಮಾ ನಗರ ವಾರ್ಡ್‌ಗೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ.
– ಯಲಹಂಕದ ಅಟ್ಟೂರಿನಲ್ಲಿ ಗಲಾಟೆ, ಆರು ಮಂದಿ ಯುವಕರು ಪೊಲೀಸ್ ವಶಕ್ಕೆ
– ಜಿಂಕೆ ಪಾರ್ಕ್‌ ವಾರ್ಡ್‌ನಲ್ಲಿ 200 ಮಂದಿ ಹೆಸರು ನಾಪತ್ತೆ.
– ಯಲಹಂಕದಲ್ಲಿ ಜೆಡಿಎಸ್‌ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆಗೆ ಮುಂದಾದ ಶಾಸಕ ವಿಶ್ವನಾಥ್‌.
– ಜೆಪಿನಗರ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ವರಲಕ್ಷ್ಮಿ ಪತಿ ಬಂಧನ. ರಾತ್ರಿ ಹಣ ಹಂಚುತ್ತಿದ್ದ ಆರೋಪ.
– ಕಚೇರಿ ಮೇಲಿದ್ದ ಪಕ್ಷದ ಚಿಹ್ನೆ ಮುಚ್ಚಬೇಕೆಂಬ ಸೂಚನೆ ಪಾಲಿಸದ ಬಿಜೆಪಿ. ಕಾಂಗ್ರೆಸ್‌, ಜೆಡಿಎಸ್‌ನಿಂದ ದೂರು.
– ಶಿವಾಜಿನಗರದಲ್ಲಿ ಮತ ಚಲಾಯಿಸಲು ತೆರಳುತ್ತಿದ್ದ 22 ವರ್ಷದ ಯುವಕನ ತಲೆ ಮೇಲೆ ಮರದ ಕೊಂಬೆ ಬಿದ್ದು ಸಾವು.
– ಸ್ಥಳೀಯ ಶಾಸಕನ ಕುಮ್ಮಕ್ಕಿನ ಮೇಲೆ ಕಾಂಗ್ರೆಸ್‌ ಏಜೆಂಟ್‌ ನಂತೆ ವರ್ತಿಸುತ್ತಿರುವ ಜೀವನ್‌ಬಿಮಾ ನಗರದ ಪೊಲೀಸ್‌ ಇನ್ಸ್‌ಪೆಕ್ಟರ್‌ ಜೀತೇಂದ್ರ ಅವರಿಂದ ಜೆಡಿಎಸ್‌ ಕಾರ್ಯಕರ್ತರಿಗೆ ಕಿರುಕುಳ. ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬೆದರಿಕೆ.
– ವೃಷಭಾವತಿ ನಗರದಲ್ಲಿ ಮತ ಚಲಾಯಿಸಿದ ನಂತರ 70 ವರ್ಷದ ನಾರಾಯಣಪ್ಪ ಹೃದಯಾಘಾತದಿಂದ ಸಾವು.

Write A Comment