ಕರ್ನಾಟಕ

ವಿದ್ಯಾರ್ಥಿನಿ ಅಪಹರಿಸಿ ಕಾರಿನಲ್ಲಿ ಅತ್ಯಾಚಾರ..!

Pinterest LinkedIn Tumblr

rape

ಮಾಗಡಿ, ಜೂ.18: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಯುವಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಸೋಮವಾರ ಶಾಲೆ ಬಳಿ ಬಂದ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಬಿಡುವುದಾಗಿ ಕಾರಿನಲ್ಲಿ ಕೂರಿಸಿಕೊಂಡು ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ನಂತರ ನಡೆದ ಘಟನೆಯನ್ನು ಯಾರಿಗೂ ಹೇಳದಂತೆ ಆರೋಪಿ ಬೆದರಿಕೆ ಹಾಕಿ ಆಕೆಯನ್ನು ಮನೆಗೆ ಬಿಡಲಾಗಿತ್ತು. ಈ ವಿಷಯ ತಿಳಿದ ಮನೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣದ ಗಂಭೀರತೆ ಅರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಣಿಗಲ್ ತಾಲೂಕು ಹೆಬ್ಬೂರು ಹೋಬಳಿಯ ಚಿಕ್ಕಾಪುರದ ಗಿರೀಶ್ ಎಂಬುನನ್ನು ಬಂಧಿಸಿದ್ದಾರೆ. ಈ ನಡುವೆ ಕಾರಿನಲ್ಲಿ ಇವನ ಜತೆ ಇದ್ದ ಮತ್ತಿಬ್ಬರು ಗೆಳೆಯರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ವಿವರ: ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದ ಗಿರೀಶ ಆಕೆಯನ್ನು ಶಾಲೆಯಿಂದ ಅಪಹರಿಸಿ ನೆಲಮಂಗಲದ ಕಡೆಗೆ ಕರೆದೊಯ್ದಿದ್ದ.

ಹೆದ್ದಾರಿಯಲ್ಲಿ ಕಾರು ಕೆಟ್ಟಿದೆ ಎಂದು ನಿಲ್ಲಿಸಿ ನಂತರ ಮೆಕ್ಯಾನಿಕ್‌ನನ್ನು ಕರೆತರುವಂತೆ ತಮ್ಮ ಗೆಳೆಯರಿಗೆ ಹೇಳಿ ಕಳುಹಿಸಿ ನಂತರ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ. ನಂತರ ಅದೇ ಕಾರಿನಲ್ಲಿ ಆಕೆಯನ್ನು ಕರೆತಂದು ಲಕ್ಕೇನಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಆತನ ಜತೆಯಲ್ಲಿದ್ದ ಹೆಬ್ಬೂರಿನ ಗಂಗರಾಜು, ಕೆಂಪರಾಜು ಎಂಬ ಸ್ನೇಹಿತರು ಕೂಡ ಲೈಂಗಿಕ ದೌರ್ಜನ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಪ್ರಸ್ತುತ ಕಾರನ್ನು ವಶಪಡಿಸಿಕೊಂಡು ಕುದೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Write A Comment