ಬೆಂಗಳೂರು,ಜೂ.3- ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಲನ ಚಿತ್ರ ನಿರ್ಮಾಪಕರು ಕಳೆದ ಮೂರು ದಿನಗಳಿಂದ ನಡೆಯುತ್ತಿರುವುದರಿಂದ ಧರಣಿಯಿಂದ ಚಿತ್ರರಂಗದಲ್ಲಿನ ಹಗ್ಗ ಜಗ್ಗಾಟ ಪರಿಸ್ಥಿತಿ ಇನ್ನು ಮೋದುವರೆದಿದೆ. ನಿರ್ಮಾಪಕರ ಸಂಘ ಹಾಗೂ ಚಲನ ಚಿತ್ರ ವಾಣಿಜ್ಯ ಮಂಡಳಿ ಒಗ್ಗೂಡಿ ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಕಸರತ್ತು ನಡೆಸುತ್ತಿದ್ದು,
ಈ ಎರಡೂ ಸಂಘಟನೆಗಳ ಪ್ರಮುಖರ ಎರಡು ತಂಡಗಳು ಪ್ರತ್ಯೇಕವಾಗಿ ಕಲಾವಿದರೂ ,ಚಿತ್ರ ಮಂದಿರ ಮಾಲೀPರೋಂದಿಗೆ ಮಾತುಕತೆ ನಡೆಸಲು ನಿರ್ಧರಿಸಿ ಈಗಾಗಲೇ ಈ ಬಗ್ಗೆ ಕಾರ್ಯ ಪ್ರರ್ವತ್ತ ವಾಗಿದೆ. ಇದರ ಅಂಗವಾಗಿ ನಿರ್ಮಾಪಕ ರಾದ ರಾಕ್ಲೈನ್ ವೆಂಕಟೇಶ್, ಮುನಿರತ್ನ, ನಟ ಜಗ್ಗೇಶ್, ತಾರ ನೇತೃತ್ವದ ಒಂದು ತಂಡ ಅಂಬರೀಶ್ ಅವರನ್ನು ಭೇಟಿಮಾಡಿದ್ದು ಅವರು ಇದೇ 7ರ ಭಾನುವಾರದಂದು ಕಲಾವಿದರೋಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ,ನಿರ್ಮಾಪಕ ಧರಣಿ ಸ್ಥಳಕ್ಕೆ ನಿರ್ಮಾಪಕ, ಹಂಚಿಕೆದಾರರೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭೇಟಿನೀಡಿ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಲಿದ್ದರೆ.