ಬೆಂಗಳೂರು, ಮೇ 20-ನಗರದ ಸಾಯಿ ಗೋಲ್ಡ್ ಪ್ಯಾಲೇಸ್ನ ಹಬ್ಬದ ಅಂಗವಾಗಿ ವಾರೆಂಟಿ, ಗ್ಯಾರೆಂಟಿ ಮತ್ತು ಸೆಕ್ಯುರಿಟಿ ಯೋಜನೆಗಳನ್ನು ಪ್ರಕಟಿಸಿದ್ದು 5 ಸಾವಿರ ರೂ. ಮೇಲ್ಪಟ್ಟ ಮೌಲ್ಯದ ಆಭರಣಗಳ ಖರೀದಿಗೆ ಉಚಿತ ವಿಮೆ ನೀಡಲಾಗುತ್ತದೆ. ಇದು ರಾಜ್ಯದಲ್ಲಿ ಆಭರಣ ಉದ್ಯಮದಲ್ಲೇ ಪ್ರಥಮ ಕ್ರಮವಾಗಿದೆ.
ಈ ವಿಮಾ ಯೋಜನೆಗೆ ಖ್ಯಾತ ನಟಿಯರಾದ ಭವ್ಯಾ, ರೂಪಿಕಾ ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ಮುಖ್ಯಸ್ಥ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶರವಣ, ಜೂನ್ 5 ರವರೆಗೆ ಚಾಲ್ತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಕೊಳ್ಳುವ ಆಭರಣಗಳಿಗೆ ಯಾವುದೇ ಮೇಕಿಂಗ್ ಚಾರ್ಜ್, ಸ್ಟೋನ್ ಚಾರ್ಜ್ ಇಲ್ಲ. ಕೇವಲ ಶೇ.9ರಷ್ಟು ವೇಸ್ಟೇಜ್ ಇರುತ್ತದೆ ಎಂದು ಪ್ರಕಟಿಸಲಾಗಿದೆ.
ಬೆಳ್ಳಿಯ ವಸ್ತುಗಳ ಮೇಲೆ ಶೇ.25ರಷ್ಟು ವಿನಾಯಿತಿ ಪಡೆಯಬಹುದು. ಅಲ್ಲದೆ ಕೊಳ್ಳುವ ಪ್ರತಿ ಕ್ಯಾರೆಟ್ ಡೈಮಂಡ್ಗೆ 5 ಸಾವಿರ ರೂ. ವಿನಾಯಿತಿ ಇರುತ್ತದೆ. ಈ ಸಂದರ್ಭದಲ್ಲಿ ಸಾಯಿ ಗೋಲ್ಡ್ ಪ್ಯಾಲೇನಲ್ಲಿ 50 ಸಾಔಇರ ರೂ. ಮೇಲ್ಪಟ್ಟ ಖರೀದಿಗೆ ಒಂದು ಬೆಳ್ಳಿ ವಿಗ್ರಹ ಉಚಿತ ನೀಡಲಾಗುತ್ತದೆ. ಒಂದು ಲಕ್ಷ ರೂ. ಮೇಲ್ಪಟ್ಟ ಖರೀದಿಗೆ ಚಿನ್ನದ ನಾಣ್ಯ ಉಚಿತ ನೀಡಲಾಗುತ್ತದೆ. ಐದು ಲಕ್ಷ ರೂ. ಮೀರಿ ಕೊಳ್ಳುವವರಿಗೆ ಡೈಮಂಡ್ ಪೆಂಡೆಂಟ್ ಉಚಿತವಾಗಿ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ತಯಾರಿಕೆಯ ಬೆಲೆಯಲ್ಲಿ ಸೀರೆಗಳನ್ನು ನೀಡಲಾಗುತ್ತದೆ. ಖರೀದಿಸುವ ಎಲ್ಲಾ ಸೀರೆಗಳ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.