ಕರ್ನಾಟಕ

ನಟ ಚೇತನ್ ಮೇಲೆ ಹಲ್ಲೆ: ಎಸ್‌ಐ ನವೀನ್ ವಿರುದ್ಧ ದೂರು

Pinterest LinkedIn Tumblr

Chetan

ಬೆಂಗಳೂರು: ಕಬ್ಬನ್ ಪಾರ್ಕ್ ಠಾಣಾ ಎಸ್‌ಐ ನವೀನ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಚೇತನ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಜನವರಿ 24ರ ರಾತ್ರಿ ಎಂಜಿ ರಸ್ತೆಯ ಬಳಿ ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಎಸ್‌ಐ ನವೀನ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಚೇತನ್ ಆಯುಕ್ತ ಎಂ.ಎನ್ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.

ಗೆಳೆಯರನ್ನು ಕರೆತರುವ ಸಂದರ್ಭದಲ್ಲಿ ಎಂಜಿ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದೇ. ಅಲ್ಲಿಗೆ ಬಂದ ಎಸ್‌ಐ ಇಲ್ಲಿಂದ ತೆರಳುವಂತೆ ದಬ್ಬಾಯಿಸಿದರು. ಅಲ್ಲದೆ ಆ ಸಂದರ್ಭದಲ್ಲಿ ನನಗೆ ಏಕವಚನ ಬಳಸಿದರು. ಇದನ್ನು ನಾನು ಪ್ರಶ್ನಿಸಿದ್ದೆ. ಇದರಿಂದ ಕೆರಳಿದ ಎಸ್‌ಐ ನವೀನ್ ನನ್ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ದು, ಸೆಲ್‌ನಲ್ಲಿ ಹಾಕಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Write A Comment