ಕರ್ನಾಟಕ

ಬ್ಲೇಡ್‍ನಿಂದ ಕುತ್ತಿಗೆ ಕೊಯ್ದು ಪತ್ನಿ ಕೊಲೆ

Pinterest LinkedIn Tumblr

Murder1

ಬೆಂಗಳೂರು, ನ.15-ಚಿಕಿತ್ಸೆಗೆಂದು ಬೆಂಗಳೂರಿಗೆ ಬಂದಿದ್ದ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯನ್ನು ಬ್ಲೇಡ್‍ನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಪಾವಗಡದ ಸುಮಾ(25) ಗಂಡ ಆನಂದ್(28)ನಿಂದಲೇ ಹತ್ಯೆಯಾದ ನತದೃಷ್ಟೆ.   ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವ ಉದ್ದೇಶದಿಂದ  ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿರುವ ಸಂಬಂಧಿ ಮಂಜುನಾಥ್ ಅವರ ಮನೆಗೆ ಸುಮಾ ಮತ್ತು ಆನಂದ್ ದಂಪತಿ ಗುರುವಾರ ಸಂಜೆ ಬಂದಿದ್ದಾರೆ.

ನಿನ್ನೆ ಮಂಜುನಾಥ್ ಹಾಗೂ ಅವರ ಕುಟುಂಬ ಸದಸ್ಯರು ತಮ್ಮ ತಮ್ಮ ಕೆಲಸಗಳಿಗೆ ಹೋಗಿದ್ದು, ಮನೆಯಲ್ಲಿ ನೆಂಟ ದಂಪತಿಯಷ್ಟೇ ಇದ್ದರು. ಮಧ್ಯಾಹ್ನ ವೇಳೆಗೆ ಆನಂದ್ ಮತ್ತು ಸುಮಾ ನಡುವೆ ಜಗಳವಾಗಿದ್ದು, ಒಂದು ಹಂತದಲ್ಲೇ ಆನಂದ್ ಬ್ಲೇಡ್‍ನಿಂದ ಸುಮಾಳ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ಸಂಜೆ ಮಂಜುನಾಥ್ ಕುಟುಂಬದವರು ಮನೆಗೆ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದ್ದು, ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಠಾಣೆ ಪೆÇಲೀಸರು ಆರೋಪಿ ಆನಂದ್‍ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆನಂದ್ ಈ ಹಿಂದೆ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದನೆಂದು, ಪ್ರಸ್ತುತ ಪಾವಗಡದಲ್ಲೇ ನೆಲೆಸಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

Write A Comment