ಕರ್ನಾಟಕ

ವಿಕಲಚೇತನರ ರ್ಯಾಲಿಗೆ ರೈಲ್ವೆ ಸಚಿವ ಸದಾನಂದಗೌಡ ಚಾಲನೆ

Pinterest LinkedIn Tumblr

MYARATHAN

ಬೆಂಗಳೂರು, ಸೆ. 28: ವಿಕಲಚೇತನರ ಸಹಾಯಾರ್ಥ ಸಂಚಲನ ಸಂಸ್ಥೆ ಏರ್ಪಡಿಸಿದ್ದ ರನ್-5ಕೆ ಮ್ಯಾರಥಾನ್‌ಗೆ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ರವಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ರವಿವಾರ ಏರ್ಪಡಿಸಿದ್ದ ಓಟದಲ್ಲಿ ವಿಕಲಚೇತನ ಯುವಕ, ಯುವತಿಯರು, ಹಿರಿಯ ನಾಗರಿಕರು ಸೇರಿದಂತೆ 3 ಸಾವಿ ರಕ್ಕೂ ಹೆಚ್ಚು ಮಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್‌ರ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಭಾರತೀಯ ಪ್ಯಾರಾ ಲಂಪಿಕ್ ತಂಡಕ್ಕೆ ಸದಾನಂದಗೌಡ ಶುಭ ಹಾರೈಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕ ಅಶ್ವತ್ಥ ನಾರಾಯಣ ಇನ್ನಿತರ ಗಣ್ಯರು ಫಲಕದಲ್ಲಿ ಸಹಿ ಹಾಕಿದರು. ಆನಂತರ ಮಾತನಾಡಿದ ಸದಾನಂದಗೌಡ, ಸಮಾಜ ವಿಕಲ ಚೇತನರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

Write A Comment